ಭಾರತ್‌ ಬಂದ್‌ಗೆ ಮುಂಚಿತವಾಗಿ ನೊಯಿಡದಲ್ಲಿ ನಿಷೇಧಾಜ್ಞೆ!

0
362

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಡಿ.7: ರೈತ ಸಂಘಟನೆಗಳು ಕರೆ ನೀಡಿದ ಭಾರತ ಬಂದ್‍ಗೆ ಮುಂಚಿತವಾಗಿ ನೊಯಿಡದಲ್ಲಿ ಪೊಲೀಸರು ನಿಷೇಧಾಜ್ಞೆ ಹೇರಿದ್ದಾರೆ. ಕೊರೋನ ಹರಡುವುದನ್ನು ತಡೆಯುವ ನೆಪದಲ್ಲಿ ಗೌತಮ ಬುದ್ಧ ನಗರದಲ್ಲಿ ನಿಷೇಧಾಜ್ಞೆ ಘೋಷಿಸಿದ್ದು, ಜನುವರಿ 2ರ ವರೆಗೆ ಮುಂದುವರಿಯಲಿದೆ. ದಿಲ್ಲಿ -ಉತ್ತರಪ್ರದೇಶ ಗಡಿ ಪ್ರದೇಶವಾದ ನೊಯಿಡ ಉತ್ತರಪ್ರದೇಶದಲ್ಲಿದೆ.

ಆದರೆ ದಿಲ್ಲಿಗೆ ಅತ್ಯಂತ ಹತ್ತಿರದಲ್ಲಿದೆ. ಕ್ರಿಸ್‍ಮಸ್, ನ್ಯೂ ಇಯರ್ ಭಾಗವಾಗಿ ಕೊರೋನ ಹರಡುವುದನ್ನು ತಡೆಯುವುದಕ್ಕೆ ಮುನ್ನೆಚ್ಚರಿಕೆಯಾಗಿ ಸೆಕ್ಷನ್ 144 ಘೋಷಿಸಲಾಗಿದೆ ಎಂದು ಯೋಗಿ ಆದಿತ್ಯನಾಥ್ ಸರಕಾರ ಹೇಳಿದೆ.

ಇದೇ ವೇಳೆ ರೈತರಿಗೆ ಬೆಂಬಲ ಸೂಚಿಸಿ ದಿಲ್ಲಿ ಮುಖ್ಯಮಂತ್ರಿ ಇಂದು ಸಿಂಘು ಗಡಿಗೆ ಬರಲಿದ್ದಾರೆ. ರೈತರಿಗೆ ದಿಲ್ಲಿ ಸರಕಾರ ಮಾಡಿದ ಸೌಕರ್ಯಗಳನ್ನು ಮುಖ್ಯಮಂತ್ರಿ ನೋಡಿ ಹೋಗಲಿದ್ದಾರೆ. ಇದೇ ವೇಳೆ ನಾಳೆಯ ಬಂದ್‍ಗೆ ಬೆಂಬಲವಿಲ್ಲ ಎಂದು ಆರ್‌ಎಸ್‌ಎಸ್‌ ರೈತ ವಿಭಾಗ ಭಾರತೀಯ ಕಿಸಾನ್ ಸಂಘ್ ತಿಳಿಸಿದೆ.