ಸೌರವ್ ಗಂಗೂಲಿ ಪುನಃ ಆಸ್ಪತ್ರೆಗೆ ದಾಖಲು

0
400

ಸನ್ಮಾರ್ಗ ವಾರ್ತೆ

ಕೊಲ್ಕತಾ: ಬಿಸಿಸಿಐ ಅಧ್ಯಕ್ಷ ಮಾಜಿ ಭಾರತ ಕ್ರಿಕೆಟಿಗ ಸೌರವ್‍ ಗಂಗೂಲಿಯವರಿಗೆ ಪುನಃ ಎದೆನೋವು ಕಾಣಿಸಿಕೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇಂದು ಬೆಳಗ್ಗೆ ಎದೆ ನೋವು ಕಂಡು ಬಂತು. ಕೂಡಲೇ ಕೊಲ್ಕತಾದಲ್ಲಿರುವ ಅಪೋಲೊ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಇನ್ನೂ ಅವರ ಆರೋಗ್ಯ ಹೇಗಿದೆ ಎಂಬ ವಿವರಗಳು ಹೊರಗೆ ಬಂದಿಲ್ಲ.

ಈ ತಿಂಗಳ ಮೊದಲಲ್ಲಿ ಅವರಿಗೆ ಹೃದಯಾಘಾತವಾಗಿತ್ತು. ಆಂಜಿಯೊ ಪ್ಲಾಸ್ಟಿ ಶಸ್ತ್ರಕ್ರಿಯೆಯ ಕೆಲವು ದಿನಗಳ ನಂತರ ಅವರು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದರು. ಮನೆಯಲ್ಲಿದ್ದರೂ ವೈದ್ಯರ ನಿರೀಕ್ಷಣೆಯಲ್ಲಿದ್ದರು ಎಂಬುದಾಗಿ ವರದಿಯಾಗಿದೆ.