ಭಾಷಣ ಸ್ಪರ್ಧೆ: ಜ. 7 ರಂದು ಬಹುಮಾನ ವಿತರಣೆ

0
1167

ಮಂಗಳೂರು: “ಪ್ರವಾದಿ ಮುಹಮ್ಮದ್(ಸ) ಶ್ರೇಷ್ಠ ಮಾರ್ಗದರ್ಶಕ” ಎಂಬ ರಾಜ್ಯವಾಪಿ ಸೀರತ್ ಅಭಿಯಾನದ ದ.ಕ. ಜಿಲ್ಲಾ ಸ್ವಾಗತ ಸಮಿತಿಯು ಆಯೋಜಿಸಿದ ಪ್ರೌಢ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಭಾಷಣ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭವು  ಜನವರಿ 7 ರಂದು ಸೋಮವಾರ ಅಪರಾಹ್ನ 3:00 ರಿಂದ 4:30ರ ತನಕ ಮೂಡಬಿದ್ರೆಯ ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ  ನಡೆಯಲಿದೆ.

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ. ಉಮಾನಾಥ ಕೋಟ್ಯಾನ್ (ಶಾಸಕರು ಮೂಡಿಬಿದ್ರೆ ವಿಧಾನ ಸಭಾ ಕ್ಷೇತ್ರ), ಡಾ| ಎಂ. ಮೋಹನ್ ಆಳ್ವ (ಚೇರ್ಮನ್ ಆಳ್ವಾಸ್ ಎಜುಕೇಶನ್ ಫೌಂಡೇಶನ್), ಶ್ರೀ. ಅಬುಲ್ ಆಲಾ ಪುತ್ತಿಗೆ (ವಿಶ್ವಾಸ್ ಬಿಲ್ಡರ್ಸ್  ಮೂಡಬಿದ್ರೆ), ಮುಹಮ್ಮದ್ ಕುಂಞಿ (ವ್ಯವಸ್ಥಾಪಕರು ಶಾಂತಿ ಪ್ರಕಾಶನ ಮಂಗಳೂರು) ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮ  ಅಧ್ಯಕ್ಷತೆಯನ್ನು ಡಾ| ಸಿ.ಪಿ. ಹಬೀಬುರ್ರಹ್ಮಾನ್ (ಅಧ್ಯಕ್ಷರು, ಸೀರತ್ ಅಭಿಯಾನ ಸ್ವಾಗತ ಸಮಿತಿ ದ.ಕ.) ವಹಿಸಲಿದ್ದಾರೆ ಎಂದು ಸೀರತ್  ಅಭಿಯಾನದ ದ.ಕ. ಜಿಲ್ಲಾ ಸ್ವಾಗತ ಸಮಿತಿಯು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.