ಚೀನಾದ ಎದುರು ತಲೆಬಾಗಿರುವ ಮೋದಿ ಭಾರತ ಮಾತೆಯನ್ನು ಅವಮಾನಿಸಿದ್ದಾರೆ; ಸುಬ್ರಮಣ್ಯಂ ಸ್ವಾಮಿ

0
271

ಸನ್ಮಾರ್ಗ ವಾರ್ತೆ

ಬಿಜೆಪಿ ನಾಯಕ ಸುಬ್ರಹ್ಮಣ್ಯಂ ಸ್ವಾಮಿ ಅವರು ಪ್ರಧಾನಿ ನರೇಂದ್ರ ಮೋದಿಯ ವಿರುದ್ಧ ಮತ್ತೆ ಹರಿಹಾಯ್ದಿದ್ದಾರೆ.. ಭಾರತದ ಗಡಿಭಾಗವನ್ನು ಚೀನಾ ವಶಪಡಿಸಿಕೊಂಡಿರುವುದಕ್ಕೆ ಅವರು ಮೌನವಾಗಿದ್ದಾರೆ ಮತ್ತು ಭಾರತ ಮಾತೆಯನ್ನು ನರೇಂದ್ರ ಮೋದಿ ವಂಚಿಸುತ್ತಿದ್ದಾರೆ ಎಂದು ಸುಬ್ರಮಣ್ಯಂ ಸ್ವಾಮಿ ಆರೋಪಿಸಿದ್ದಾರೆ.

ಚೀನಾದ ಎದುರು ತಲೆಬಾಗಿಸಿರುವ ಮೋದಿ ಭಾರತ ಮಾತೆಗೆ ಅವಮಾನಿಸಿದ್ದಾರೆ. 2020 ರ ನಂತರ 4065 ಚದರ ಕಿಲೋಮೀಟರ್ ಭೂಮಿಯನ್ನು ಚೀನಾ ಆಕ್ರಮಿಸಿಕೊಂಡಿದ್ದು ಇಷ್ಟು ಬೃಹತ್ ಭೂಮಿ ಭಾರತಕ್ಕೆ ನಷ್ಟವಾಗಿದೆ. ಬಿಜೆಪಿಯು ನರೇಂದ್ರ ಮೋದಿ ಅವರನ್ನು ದೂರವಿಟ್ಟು ಚುನಾವಣೆಯಲ್ಲಿ ಬಹುಮತವನ್ನು ಗಳಿಸಲು ಪ್ರಯತ್ನಿಸಬೇಕು. ಪಕ್ಷದ ವಿಶ್ವಾಸಾರ್ಹತೆಗೆ ಮೋದಿ ಒಂದು ತಡೆಯಾಗಿದ್ದಾರೆ ಎಂದು ಸುಬ್ರಹ್ಮಣ್ಯಂ ಸ್ವಾಮಿ ಹೇಳಿದ್ದಾರೆ.

LEAVE A REPLY

Please enter your comment!
Please enter your name here