ಉಪೇಂದ್ರ ಕುಶ್ವಾಹ್ ಜೆಡಿಯು ತೊರೆಯಲಿ: ನಿತೀಶ್ ಕುಮಾರ್

0
155

ಸನ್ಮಾರ್ಗ ವಾರ್ತೆ

ಪಾಟ್ನಾ: ಜೆಡಿಯು ಕಾರ್ಯಕರ್ತ ಪಾರ್ಲಿಮೆಂಟ್ ಬೋರ್ಡ್ ಚೇರ್‌ಮ್ಯಾನ್ ಉಪೇಂದ್ರ ಕುಶ್ವಾಹ್ ಕೂಡಲೇ ಪಕ್ಷದಿಂದ ತೊಲಗಬೇಕೆಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ. ಇದಕ್ಕೆ “ವಾರೀಸು ಸೊತ್ತಿನ ಹಕ್ಕು ಸಿಗದೆ ನನಗೆ ಪಕ್ಷ ತೊರೆಯಲು ಸಾಧ್ಯವಿಲ್ಲ” ಎಂದು ಕುಶ್‌ವಾಹ್ ಪ್ರತಿಕ್ರಿಯಿಸಿದ್ದಾರೆ. ಬಿಜೆಪಿ ಜೊತೆ ಕುಶ್ವಾಹ್ ಸಂಪರ್ಕದಲ್ಲಿರುವ ವರದಿ ಬಂದ ಹಿನ್ನೆಲೆಯಲ್ಲಿ ಈ ಹೇಳಿಕೆ ನೀಡಲಾಗಿದೆ.

‘ಹಿರಿಯಣ್ಣಂದಿರ ಉಪದೇಶದಂತೆ ಕಿರಿಯ ಸಹೋದರ ಮನೆ ಬಿಟ್ಟು ತೊಲಗುವುದಾದರೆ ಕಿರಿಯ ಸಹೋದರನ ಸೊತ್ತನ್ನು ಹಿರಿಯ ಸಹೋದರರೆಲ್ಲಾ ಕಬಳಿಸುತ್ತಾರೆ. ಹೀಗಿರುವಾಗ ಮನೆ ಬಿಟ್ಟು (ಪಕ್ಷ ತೊರೆದು) ಹೇಗೆ ಹೋಗಲಿ?’ ಎಂದು ಕುಶ್ವಾಹ್ ಟ್ವೀಟ್ ಮಾಡಿದ್ದಾರೆ. ಅದೇ ವೇಳೆ, ನಿತೀಶ್‌ರಿಂದ ಸಾಕಷ್ಟು ಗಳಿಸಿಕೊಂಡು ಈಗ ಕುಶ್ವಾಹ್ ಪಕ್ಷವನ್ನು ಒಡೆಯಲು ನೋಡುತ್ತಿದ್ದಾರೆ. ಸದಸ್ಯತನದ ಅರ್ಜಿ ಕೂಡಾ ಅವರು ನೀಡಿಲ್ಲ. ಅವರಲ್ಲಿ ಸ್ವಾಭಿಮಾನವೆಂಬುದಿದ್ದರೆ ತಕ್ಷಣ ಪಕ್ಷ ತೊರೆದು ಹೋಗಲಿ’ ಎಂದು ಜೆಡಿಯು ನೇತಾರ ಉಮೇಶ್ ಪ್ರತಿಕ್ರಿಯಿಸಿದ್ದಾರೆ.ಕುಶ್ವಾಹ್ ಬಿಜೆಪಿ ಸೇರಲಿದ್ದಾರೆ ಎಂಬ ಸುದ್ದಿ ಹರಡಿದಾಗ ಅದನ್ನು ಈ ಹಿಂದೆ ಕುಶ್ವಾಹ್ ತಳ್ಳಿಹಾಕಿದ್ದರು.