ಸನ್ಮಾರ್ಗ ವಾರ್ತೆ
ಬಿಹಾರ: ಚುನಾವಣೆಯಲ್ಲಿ ಸೋತ ಕಾರಣಕ್ಕೆ ದಲಿತರಿಗೆ ಮಾರಣಾಂತಿಕವಾಗಿ ಹೊಡೆದು ನೆಲಕ್ಕೆ ಉಗುಳಿ ನೆಕ್ಕಿಸಿದ ಘಟನೆ ಬಿಹಾರದ ಔರಂಗಾಬಾದ್ನಲ್ಲಿ ನಡೆದಿದೆ. ಪಂಚಾಯತ್ ಮುಖ್ಯಸ್ಥ ಸ್ಥಾನಕ್ಕೆ ಸ್ಪರ್ಧಿಸಿ ಸೋತ ಬಲವಂತ್ ಸಿಂಗ್ ಎಂಬಾತನನ್ನು ಈ ಕೃತ್ಯಕ್ಕಾಗಿ ಪೊಲೀಸರು ಬಂಧಿಸಿದ್ದಾರೆ.
ದಲಿತರು ಓಟು ಹಾಕಿಲ್ಲ. ಹಣ ಕೊಟ್ಟರೂ ಓಟು ನೀಡಿಲ್ಲವೆಂದು ಈ ಅಮಾನವೀಯ ಕೃತ್ಯವೆಸಗಿದ್ದಾನೆ. ಘಟನೆಯ ವೀಡಿಯೊ ಹೊರ ಬಂದಿದ್ದು ತನಗೆ ಓಟು ಹಾಕಲು ಇಬ್ಬರಿಗೆ ಹಣ ಕೊಟ್ಟಿದ್ದೆ ಅವರು ವಂಚಿಸಿದರೆಂದು ಬಂಧಿತನು ಹೇಳಿಕೊಂಡಿದ್ದಾನೆ. ಇಬ್ಬರನ್ನು ಹೀನಾಯವಾಗಿ ಜರೆದು ಭಕ್ಷಿ ತೆಗೆಯುವ ಶಿಕ್ಷೆ ನೀಡಿದ್ದಾನೆ.
ಒಬ್ಬನ್ನು ಕ್ರೂರವಾಗಿ ಥಳಿಸಿ, ನೆಲಕ್ಕೆ ಉಗುಳಿ ಅದನ್ನು ನೆಕ್ಕಿಸಿದ್ದು, ಇವೆಲ್ಲ ವೀಡಿಯೊದಲ್ಲಿವೆ. ವೀಡಿಯೊ ವೈರಲ್ ಆದನಂತರ ಪೊಲೀಸರು ಸಕ್ರಿಯರಾಗಿದ್ದು, ಜಿಲ್ಲಾ ಪೊಲೀಸ್ ಸೂಪರಿಡೆಂಟ್ ಕುಮಾರ್ ಸೂಚನೆಯ ಮೇರೆಗೆ ಬಲವಂತ್ ಸಿಂಗ್ನನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆಯಲ್ಲಿ ತನಿಖೆ ನಡೆಯುತ್ತಿದೆ.