ವಾರ್ತಾಭಾರತಿ’ ಪ್ರಧಾನ ಸಂಪಾದಕ ಅಬ್ದುಸ್ಸಲಾಮ್ ಪುತ್ತಿಗೆ ತಾಯಿ ನಿಧನ

0
504

ಸನ್ಮಾರ್ಗ ವಾರ್ತೆ

ವಾರ್ತಾಭಾರತಿ ಪತ್ರಿಕೆಯ ಪ್ರಧಾನ ಸಂಪಾದಕರಾದ ಅಬ್ದುಸ್ಸಲಾಂ ಪುತ್ತಿಗೆಯವರ ತಾಯಿ ರುಖಿಯಾ ಹಸನ್(75) ಇಂದು ನಿಧನರಾದರು.

ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ಸಮೀಪದ ಪುತ್ತಿಗೆಯ ದಿವಂಗತ ಮೌಲಾನಾ ಇ ಎಂ ಶಾಫಿ ಅವರ ಪತ್ನಿ ಹಾಗೂ ದಿವಂಗತ ಕುದ್ರೋಳಿ ಹಸನಬ್ಬ ಅವರ ಪುತ್ರಿ ರುಖಿಯಾ ಹಸನ್ ಅವರು ಮಂಗಳವಾರ ಮಧ್ಯಾಹ್ನ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ವಾರ್ತಾಭಾರತಿ ಪತ್ರಿಕೆಯ ಪ್ರಧಾನ ಸಂಪಾದಕ ಅಬ್ದುಸ್ಸಲಾಮ್‌ ಪುತ್ತಿಗೆ, ಐಪಿಎಸ್ ಅಧಿಕಾರಿ ಅಹದ್ ಪುತ್ತಿಗೆ ಹಾಗೂ ಉದ್ಯಮಿಗಳಾದ ರವೂಫ್ ಪುತ್ತಿಗೆ ಸಹಿತ ಐವರು ಪುತ್ರರು, ಮೂವರು ಪುತ್ರಿಯರು ಹಾಗೂ ಅಪಾರ ಬಂಧು ಬಳಗವನ್ನು ಅವರು ಅಗಲಿದ್ದಾರೆ.

ಮೃತರ ಅಂತಿಮ ಸಂಸ್ಕಾರವು ಮಂಗಳವಾರ ರಾತ್ರಿ ಮೂಡಬಿದಿರೆಯ ಪುತ್ತಿಗೆಯಲ್ಲಿ ನಡೆಯಲಿದೆ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.