ಸನ್ಮಾರ್ಗ ವಾರ್ತೆ
ಹೊಸದಿಲ್ಲಿ: ದೇಶದಲ್ಲಿ ಆಮದು ಮಾಡಿಕೊಳ್ಳಲಾಗುವ ಖಾದ್ಯ ಎಣ್ಣೆಯ ಮೂಲ ಕಸ್ಟಮ್ಸ್ ತೆರಿಗೆಯನ್ನು ಕೇಂದ್ರ ಸರಕಾರ ರದ್ದು ಪಡಿಸಿದೆ. ಪಾಮ್ ಓಯಿಲ್, ಸೋಯಬೀನ್ ಎಣ್ಣೆ, ಸೂರ್ಯಕಾಂತಿ ತೈಲಗಳ ಸೆಸ್ನ್ನೂ ಕಡಿಮೆ ಮಾಡಲಾಗಿದೆ.
ದೇಶದಲ್ಲಿ ರೈತರಿಗೆ ತೊಂದರೆಗಳಿರುವಾಗ ಈ ತೀರ್ಮಾನದ ವಿರುದ್ಧ ವ್ಯಾಪಕ ಟೀಕೆಗಳು ವ್ಯಕ್ತವಾಗಿದೆ. ಹಬ್ಬದಲ್ಲಿ ಭರವಸೆ ತುಂಬಲು ದೇಶದೊಳಗೆ, ಲಭ್ಯತೆ ಹೆಚ್ಚಿಸಲು ಸಹಾಯಕವಾಗಲೆಂದು ಹೊಸ ನಿರ್ಧಾರವೆಂದು ಕೇಂದ್ರ ಸರಕಾರ ಹೇಳಿದೆ.
ತೆರಿಗೆ ತೆರವು ಅಕ್ಟೋಬರ್ 14ರಿಂದ ಜಾರಿಗೆ ಬರಲಿದೆ ಎಂದು ಸೆಂಟ್ರಲ್ ಬೋರ್ಡ್ ಆಫ್ ಇಂಡಯರೆಕ್ಟ್ ಟಾಕಸ್ಸಸ್ ಆಂಡ್ ಕಸ್ಟಮ್ಸ್ ಪ್ರಕಟಣೆ ನೀಡಿದೆ.