ಹಸಿವಿನಿಂದ ಕಂಗೆಟ್ಟ ಮದ್ರಸಾ ವಿದ್ಯಾರ್ಥಿಗಳಿಗೆ ಆಹಾರ ನೀಡಿದ ಸಿಖ್ ಗುರುದ್ವಾರ

0
4017

ಸನ್ಮಾರ್ಗ ವಾರ್ತೆ

ಅಮೃತಸರ, ಎ 2: ಕರುಣೆಯ ದ್ವಾರವನ್ನು ಸಿಖ್ ಗುರುದ್ವಾರ ತೆರೆದಿದೆ. ಮದ್ರಸಾ ವಿದ್ಯಾರ್ಥಿಗಳ ಸಹಿತ ಸಾವಿರಾರು ಮಂದಿಗೆ ಮಾಲೆರ್‍ಕೋಟ್ಲ ಗುರುದ್ವಾರವು ಆಹಾರ ನೀಡಿದೆ. ಲಾಕ್ ಡೌನ್ ನಿಂದ ತಜ್‍ವೀದುಲ್ ಕುರ್‍ ಆನ್ ಮದ್ರಸಾ ಅಧಿಕಾರಿಗಳು ತಮ್ಮ ವಿದ್ಯಾರ್ಥಿಗಳಿಗೆ ಆಹಾರ ನೀಡಲಾಗದ ಸ್ಥಿತಿ ಎದುರಿಸುತ್ತಿದ್ದರು. ತದನಂತರ 40 ಮಕ್ಕಳಿಗೆ ಸಿಖ್ ಸಮುದಾಯ ಆಹಾರ ತಲುಪಿಸಿದೆ ಎಂದು ಗುರುದ್ವಾದ ಮುಖ್ಯಸ್ಥ ನರೀಂದರ್‍ಪಾಲ್ ಸಿಂಗ್ ತಿಳಿಸಿದ್ದಾರೆ. ಮಹಿಳೆಯರ ಸಹಿತ ದಿನಂಪ್ರತಿ ಸಾವಿರ ಮಂದಿಗೆ ಆಹಾರ ನೀಡಲಾಗುತ್ತಿದೆ. ವಿದ್ಯಾರ್ಥಿಗಳನ್ನು ಅವರ ಹೆತ್ತವರ ಬಳಿಗೆ ಕಳುಹಿಸುವ ಪ್ರಯತ್ನ ನಡೆಯುತ್ತಿದೆ. ರೈಲು ಇಲ್ಲದ್ದಿಂದ ಅದು ಸಾಧ್ಯವಾಗುತ್ತಿಲ್ಲ.

ಗುರುದ್ವಾರ ಕಮಿಟಿಗೆ ಮದ್ರಸಾ ಅಧ್ಯಾಪಕ ಜನಾಬ್ ಸಲೀಂ ಕೃತಜ್ಞತೆ ಸಲ್ಲಿಸಿದ್ದಾರೆ.

ಓದುಗರೇ, ಸನ್ಮಾರ್ಗ ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.