ಅಭಿನಂದನ್‍ ವರ್ಧಮಾನ್‍ರಿಗೆ ವೀರಚಕ್ರ

0
362

ಹೊಸದಿಲ್ಲಿ,ಆ. 14: ಭಾರತದ ವಾಯುಸೇನೆ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್‍ರಿಗೆ ವೀರಚಕ್ರ ಪ್ರಶಸ್ತಿ ದೊರಕಿದೆ. ದೇಶದ ಮೂರನೆ ಅತಿದೊಡ್ಡ ಸೈನಿಕ ಪುರಸ್ಕಾರವಿದು. ಸ್ವಾತಂತ್ರ್ಯ ದಿನಾಚರಣೆಯಂದು ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗವುದು.

ಭಾರತದ ಗಡಿ ದಾಟಿ ಬಂದ ಪಾಕಿಸ್ತಾನದ ಎಫ್-16 ವಿಮಾನವನ್ನು ತನ್ನ ಮಿಗ್ 21 ವಿಮಾನದಲ್ಲಿ ಪ್ರತಿರೊಧಿಸುವ ವೇಳೆ ವಿಮಾನ ಬಿದ್ದು ಅಭಿನಂದನ್ ಪಾಕಿಸ್ತಾನದಲ್ಲಿ ಸೆರೆಯಾಗಿದ್ದರು. ನಂತರ ಮಾರ್ಚ್ ಒಂದರಂದು ಪಾಕಿಸ್ತಾನ ಸರಕಾರವು ಅವರನ್ನು ಭಾರತಕ್ಕೆ ಹಸ್ತಾಂತರಿಸಿತು.

ಅಭಿನಂದ್‍ರಲ್ಲದೆ ಕಉಲ್‍ಗಾಂವ್‍ನಲ್ಲಿ ಭಯೋತ್ಪಾದಕರೊಂದಿಗೆ ಘರ್ಷಣೆಯಲ್ಲಿ ಜೀವ ಕಳಕೊಂಡ ಪ್ರಕಾಶ ಜಾಧವ್, ಸಿಆರ್‌ಪಿಎಫ್ ಯೋಧ ಹರ್ಷಪಾಲ್ ಸಿಂಗ್‍ರಿಗೆ ಕೀರ್ತಿಚಕ್ರ ಪುರಸ್ಕಾರ ನೀಡಿ ಗೌರವಿಸಲು ನಿರ್ಧರಿಸಲಾಗಿದೆ.