ಅಕ್ರಮ ಮರಳು ದಂಧೆ; ಪೋಲೀಸರ ವಿರುದ್ಧ ಗರಂ ಆದ ಶಾಸಕ ಖಾದರ್

0
133

ಸನ್ಮಾರ್ಗ ವಾರ್ತೆ

ಮಂಗಳೂರು: ನಗರದ ಹೊರವಲಯದ ರಾಣಿಪುರ ನಿವಾಸಿಯೊಬ್ಬರು ಅಕ್ರಮ ಮರಳು ದಂಧೆಕೋರರಿಂದಾಗಿ ಮನೆಗೆ ಹಾನಿಯಾಗುತ್ತಿದೆ ಎಂದು ಶಾಸಕ ಖಾದರ್ ಎದುರು ಕಣ್ಣೀರಿಟ್ಟಿದ್ದರು. ಈ ವೇಳೆ ಆಕ್ರೋಶಗೊಂಡ ಖಾದರ್, ತಕ್ಷಣ ಫೋನ್ ಮಾಡಿ ಉಳ್ಳಾಲ ಇನ್ಸ್ಪೆಕ್ಟರ್ ಸಂದೀಪ್ ಮತ್ತು ಎಸಿಪಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

‘ಪೊಲೀಸರು ನಾಯಿ ಥರ ಅವರ ಹಿಂದೆ ಹೋಗ್ತಾರಲ್ವಾ, ನಾಚಿಗೆ ಇಲ್ವಾ?’ ‘ರಾಣಿಪುರ ಮುಖಾಂತರವೇ ಅಕ್ರಮವಾಗಿ ಮರಳು ಹೋಗ್ತಾ ಇದೆ, ನಿಮ್ಮ ಚೆಕ್ಕಿಂಗ್ ಎಲ್ಲಾ ನಮಗೆ ಗೊತ್ತಿದೆ, ತಕ್ಷಣ ರೈಡ್ ಮಾಡಿ, ಪೊಲೀಸರನ್ನ ಮರಳಿನವರು ಕಂಟ್ರೋಲ್ ಮಾಡ್ತಿದಾರಾ? ಅವರಿಗೆ ಯಾಕೆ ಹೆದರ್ತೀರಾ?’ ಒಂದು ವಾರದಿಂದ ಊರವರು ಇಲ್ಲಿ ಬಂದು ಕೂಗ್ತಾರೆ, ನಿಮಗೆ ನಿಲ್ಲಿಸಲು ಆಗಲ್ವಾ?’ ಪೊಲೀಸರು ಸರಿ ಇದ್ರೆ ಇದೆಲ್ಲಾ ಆಗುತ್ತಾ? ನೀವೇ ಖುದ್ದು ಹೋಗಿ ನಿಲ್ಲಿಸಿ’ ಅಂತ ಎಸಿಪಿಗೆ ಸೂಚನೆ ನೀಡಿದ್ದಾರೆ. ‘ಪೊಲೀಸರು ನಾಯಿ ಥರ ಅವರ ಹಿಂದೆ ಹೋಗ್ತಾರಲ್ವಾ, ನಾಚಿಗೆ ಇಲ್ವಾ?’ ಎಂದು ಉಳ್ಳಾಲ ಪೊಲೀಸರಿಗೆ ಶಾಸಕ ಖಾದರ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಅಕ್ರಮ ಮರಳು ದಂಧೆಕೋರರ ವಿರುದ್ದ ಕ್ರಮಕೈಗೊಳ್ಳದ ಉಳ್ಳಾಲ ಪೊಲೀಸರ ವಿರುದ್ದ ಯು.ಟಿ.ಖಾದರ್ ಗರಂ ಆಗಿದ್ದು, ಪೊಲೀಸ್ ಅಧಿಕಾರಿಗಳಿಗೆ ಕರೆ ಮಾಡಿ ಹಿಗ್ಗಾಮುಗ್ಗಾ ಜಾಡಿಸಿದ್ದಾರೆ.