ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಪುತ್ಥಳಿಗೆ ಅವಮಾನ ಖಂಡನಾರ್ಹ: ತಾಹೀರ್ ಹುಸೈನ್, ವೆಲ್ಫೇರ್ ಪಾರ್ಟಿ ಕರ್ನಾಟಕ

0
216

ಸನ್ಮಾರ್ಗ ವಾರ್ತೆ

ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ರವರ ಪುತ್ಥಳಿಗೆ ಕಲಬುರಗಿ ಕೋಟನೂರ್ ಪ್ರದೇಶದಲ್ಲಿ ಅವಮಾನ ಮಾಡಿದ್ದ ಕೃತ್ಯ ಖಂಡನಾರ್ಹ. ಅವಮಾನಿಸಿ ಪಟಾಕಿ ಸಿಡಿಸಿ ವಿಕೃತಿ ಮೆರೆದ ಕಿಡಿಗೇಡಿಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ, ಕರ್ನಾಟಕ ಇದರ ಅಧ್ಯಕ್ಷರಾದ ಅಡ್ವಕೇಟ್ ತಾಹೇರ್ ಹುಸೇನ್ ಕರ್ನಾಟಕ ಸರಕಾರವನ್ನು ಆಗ್ರಹಿಸಿದ್ದಾರೆ.

‘ಸಂವಿಧಾನ ಶಿಲ್ಪಿಗೆ ಅವಮಾನ ಮಾಡುವುದು ಸಂವಿಧಾನಕ್ಕೆ ಅಪಚಾರಗೈದಂತೆ. ಇತ್ತೀಚೆಗೆ ಇಂತಹಾ ಕಿಡಿಗೇಡಿ ಕೃತ್ಯಗಳು ವ್ಯಾಪಕವಾಗುತ್ತಿದೆ. ಆಡಳಿತದ ಬಗ್ಗೆ ಕಾನೂನಿನ ಬಗ್ಗೆ ಭಯವಿಲ್ಲದಿರುವುದೇ ಇಂತಹ ದುಷ್ಕೃತ್ಯ ಮರುಕಳಿಸಲು ಕಾರಣವಾಗಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸರ್ಕಾರ ಮುಂದುವರಿಯಬೇಕು.

ದಲಿತರ ಪರ ಹಕ್ಕುಗಳಿಗಾಗಿ ಹೋರಾಡಿದ ದೇಶಕ್ಕೆ ಸಂವಿಧಾನವನ್ನೇ ರಚಿಸಿದ ಓರ್ವ ಮಹಾನ್ ವ್ಯಕ್ತಿಯನ್ನು ಅವಮಾನಿಸಿ ಅದೇನು ಸಾಧಿಸಿತ್ತಾರೆ? ಜನರ ಭಾವನೆ ಕೆರಳಿಸಿ ಸಮಾಜದ ಶಾಂತಿ ನೆಮ್ಮದಿ ಕೆಡಿಸುವುದೇ ಇಂತಹವರ ಗುರಿಯಾಗಿದೆ. ಅಪರಾಧಿಗಳನ್ನು ಬಂಧಿಸಿ ಸೂಕ್ತವಾದ ಕಾನೂನು ಕ್ರಮ ಕೈಗೊಳ್ಳಲು ಸರಕಾರ ಹಿಂಜರಿಯಬಾರದು. ಜಿಲ್ಲೆಯಿಂದಲೇ ಗಡಿಪಾರು ಮಾಡಿದರೂ ಇಂತಹ ಕುಕೃತ್ಯ ಕಡಿಮೆಯಾಗಬಹುದು. ಎಂದು ಅವರು ಹೇಳಿದರು.