ಗಾಜಾದಲ್ಲಿ ಇಸ್ರೇಲ್ ಜನಾಂಗೀಯ ಹತ್ಯೆ ನಡೆಸುತ್ತಿದೆ. ಜಾಗತಿಕ ನಾಯಕರು ಇಸ್ರೇಲ್ ಗೆ ಬೆಂಬಲಿಸುತ್ತಿದ್ದಾರೆ: ಪ್ರಿಯಾಂಕಾ ಗಾಂಧಿ

0
209

ಸನ್ಮಾರ್ಗ ವಾರ್ತೆ

ಗಾಝದಲ್ಲಿ ಇಸ್ರೇಲ್ ಜನಾಂಗ ಹತ್ಯೆಯನ್ನು ನಡೆಸುತ್ತಿದೆ. ಆದರೆ ಜಾಗತಿಕ ನಾಯಕರು ಇಸ್ರೇಲ್ ನ ಈ ಕ್ರೌರ್ಯಕ್ಕೆ ಬೆಂಬಲ ನೀಡುತ್ತಿದ್ದಾರೆ. ತಕ್ಷಣವೇ ಕದನ ವಿರಾಮ ಏರ್ಪಡಬೇಕು ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ಆಗ್ರಹಿಸಿದ್ದಾರೆ.

ಫೆಲೆಸ್ತೀನ್ ನಲ್ಲಿ ಹತ್ತು ಸಾವಿರಕ್ಕಿಂತಲೂ ಅಧಿಕ ಮಂದಿ ಹತ್ಯೆಗೀಡಾಗಿದ್ದಾರೆ ಅನ್ನೋದು ಆಘಾತಕಾರಿ ಮತ್ತು ಮಾತುಗಳಿಂದ ವಿವರಿಸಲಾಗದಷ್ಟು ಭಯಾನಕವಾಗಿದೆ. ಇದರಲ್ಲಿ 5000ದಷ್ಟು ಮಂದಿ ಮಕ್ಕಳು ಎಂಬುದು ಇನ್ನಷ್ಟು ಆತಂಕಕಾರಿ. ಕುಟುಂಬಗಳು ಇಡಿಯಾಗಿ ಹತ್ಯೆಗೀಡಾಗುತ್ತಿವೆ. ಆಸ್ಪತ್ರೆಗಳು ಮತ್ತು ಆಂಬುಲೆನ್ಸ್ ಗಳಿಗೆ ಬಾಂಬ್ ಹಾಕಲಾಗುತ್ತಿದೆ. ನಿರಾಶ್ರಿತ ಶಿಬಿರಗಳನ್ನೂ ಈ ಬಾಂಬುಗಳು ಬಿಡುತ್ತಿಲ್ಲ. ಪ್ರಮುಖ ರಾಷ್ಟ್ರಗಳು ಈ ಬಾಂಬುಗಳಿಗೆ ಆರ್ಥಿಕ ಸಹಾಯವನ್ನು ನೀಡುತ್ತಿವೆ. ಫೆಲೆ ಸ್ತೀನ್ ನಲ್ಲಿ ನಡೆಯುತ್ತಿರುವುದು ಜನಾಂಗ ಹತ್ಯೆ. ಆದ್ದರಿಂದ ಜಾಗತಿಕ ಶಕ್ತಿಗಳು ಫೆಲೆಸ್ತೀನ್ ನಲ್ಲಿ ಕದನ ವಿರಾಮ ಬರುವಂತೆ ನೋಡಿಕೊಳ್ಳಬೇಕು ಎಂದವರು ಆಗ್ರಹಿಸಿದ್ದಾರೆ.

ಫೆಲೆಸ್ತೀನ್ ವಿಷಯದಲ್ಲಿ ಇದೇ ಮೊದಲ ಬಾರಿ ಪ್ರಿಯಾಂಕ ಪ್ರತಿಕ್ರಿಯಿಸಿದ್ದಾರೆ. ಈ ಮೊದಲು ರಾಹುಲ್ ಗಾಂಧಿ ಈ ವಿಷಯದಲ್ಲಿ ಮಾತಾಡಿದ್ದರು