ಶಿಥಿಲಾವಸ್ಥೆಯಲ್ಲಿದ್ದ ಮನೆಯನ್ನು ದುರಸ್ಥಿಗೊಳಿಸಿ ಹಸ್ತಾಂತರಿಸಿದ ಜೆಐಹೆ‌ಚ್ ಸಮಾಜ ಸೇವಾ ಘಟಕ

0
477

ಸನ್ಮಾರ್ಗ ವಾರ್ತೆ

ಮಂಗಳೂರು: ಸಮಾಜ ಸೇವಾ ಘಟಕ, ಜಮಾಅತೆ ಇಸ್ಲಾಮೀ ಹಿಂದ್ ಮಂಗಳೂರು ವತಿಯಿಂದ, ತಾಲೂಕಿನ ಮಲಾರ್ ಎಂಬಲ್ಲಿ ಅತ್ಯಂತ ಶಿಥಿಲಾವಸ್ಥೆಯಲ್ಲಿದ್ದ ಮನೆಯನ್ನು ಎತ್ತರಿಸಿ, ದುರಸ್ಥಿಗೊಳಿಸಿ ಮತ್ತು ಎಲ್ಲ ಮೂಲಭೂತ ಸೌಕರ್ಯಗಳೊಂದಿಗೆ ಸುಸಜ್ಜಿತ ಗೊಳಿಸಿ ಕುಟುಂಬಕ್ಕೆ ಹಸ್ತಾಂತರಿಸಲಾಯಿತು.

ಜಮಾಅತೆ ಇಸ್ಲಾಮೀ ಹಿಂದ್‌ ಉಳ್ಳಾಲ ಶಾಖೆಯ ಅಧ್ಯಕ್ಷರಾದ ಜ| ಅಬ್ದುಲ್ ಕರೀಮ್‌ ಉಳ್ಳಾಲರವರು ಸರಳ ಕಾರ್ಯಕ್ರಮದಲ್ಲಿ ಉದ್ಘಾಟಿಸಿ, ಮನೆಯಲ್ಲಿ ನಾವು ನಿರ್ವಹಿಸಬೇಕಾದ ಜವಾಬ್ದಾರಿಕೆಗಳನ್ನು ನೆನಪಿಸಿದರು. ಮಲಾರ್‌ ವರ್ತುಲ ಸಂಚಾಲಕರಾದ ಜ|ಬದ್ರುದ್ದೀನ್ ಹಾಗೂ ಅಬ್ದುಲ್‌ ಕರೀಮ್‌ ಬೆಂಗರೆ ಸಂದರ್ಭೋಚಿತ ಉಪದೇಶ ನೀಡಿ, ಶುಭ ಹಾರೈಸಿದರು. ಹುಸೈನ್ ಬಶೀರ್ ದೇರಳಕಟ್ಟೆ, ಶಂಶೀರ್‌ ಪಿಲಾರ್‌ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಆರ್ಥಿಕವಾಗಿ ಸಹಕರಿಸಿದ ಎಲ್ಲ ದಾನಿಗಳಿಗೆ ಜಮಾಅತೆ ಇಸ್ಲಾಮೀ ಕೃತಜ್ಞತೆ ಸಲ್ಲಿಸಿದೆ.