ಈದುಲ್ ಅಝ್ಹಾದಲ್ಲಿ ಅತೀವ ಜಾಗ್ರತೆ ವಹಿಸಿ: ಕಾಂತಪುರಂ ಎ.ಪಿ.ಅಬೂಬಕರ್ ಮುಸ್ಲಿಯಾರ್ ಕರೆ

0
1411

ಸನ್ಮಾರ್ಗ ವಾರ್ತೆ

ಕೋಝಿಕ್ಕೋಡ್,ಜು.15: ಕೊರೋನ ರೋಗಿಗಳ ಸಂಖ್ಯೆ ದಿನಾಲು ಹೆಚ್ಚಳವಾಗುತ್ತಿರುವ ಪರಿಸ್ಥಿತಿಯಲ್ಲಿ ಬಕ್ರೀದ್ ಮತ್ತು ಬಲಿ ಕರ್ಮದಲ್ಲಿ ಅತೀವ ಜಾಗ್ರತೆ ವಹಿಸಬೇಕೆಂದು ಕಾಂತಪುರಂ ಎ.ಪಿ.ಅಬೂಬಕರ್ ಮುಸ್ಲಿಯಾರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ ಎಂದು ವರದಿಯಾಗಿದೆ. ಈದ್ ಮತ್ತು ಬಲಿ ವಿಶ್ವಾಸಿಗೆ ಹೆಚ್ಚು ಪ್ರಧಾನವಾಗಿದೆ ಎಂದರು.

ಅಧಿಕಾರಿಗಳ ಕೊರೋನ‌ ಸೂಚನೆಗಳನ್ನು ಅಕ್ಷರಶಃ ಪಾಲಿಸಿ ನಿರ್ವಹಿಸಬೇಕಾಗಿದೆ. ಆರೋಗ್ಯ ಸುರಕ್ಷೆಗೆ ಹೆಚ್ಚಿನ ಪರಿಗಣನೆ ನೀಡಬೇಕು. ಈದ್ ನಮಾಝ್‍ಗೆ ಮಕ್ಕಳು, ವಯಸ್ಸಾದ ಹಿರಿಯರು ಮಸೀದಿಗೆ ಹೋಗಬಾರದು ಎಂದು ಅವರು ಹೇಳಿದರು.

ಅವರು ಮನೆಗಳಲ್ಲಿ ನಮಾಝ್ ಮಾಡಲಿ, ಉಲುಹಿಯ್ಯತ್ ನಡೆಯುವ ಸ್ಥಳಗಳಲ್ಲಿ, ಮಾಂಸ ವಿತರಣೆಯಲ್ಲೂ ಜನರು ಗುಂಪು ಸೇರದಂತೆ ನೋಡಿಕೊಳ್ಳಬೇಕೆಂದು ಕಾಂತಪುರಂ ಉಸ್ತಾದ್ ಕರೆ ನೀಡಿದರು.

 

ಓದುಗರೇ, ಸನ್ಮಾರ್ಗ ಫೇಸ್‌ಬುಕ್‌ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.