ಸನ್ಮಾರ್ಗ ವಾರ್ತೆ
ಹೊಸದಿಲ್ಲಿ, ನ.7: ಗಾಝದಲ್ಲಿ ತುರ್ತು ಕದನ ವಿರಾಮದ ಜಾಗತಿಕ ಕರೆಯಲ್ಲಿ ಭಾಗವಹಿಸದಿರುವ, ಅಮೆರಿಕ-ಇಸ್ರೇಲ್ ನಡೆಸುತ್ತಿರುವ ವಂಶ ಹತ್ಯೆಯನ್ನು ಬೆಂಬಲಿಸುವ ನಿಲುವನ್ನು ಕೇಂದ್ರ ಸರಕಾರ ನಿಲ್ಲಿಸಬೇಕೆಂದು ಎಡಪಕ್ಷಗಳು ಆಗ್ರಹಿಸಿವೆ.
ದಿಲ್ಲಿಯಲ್ಲಿ ಭಾರತದ ಮತ್ತು ಅಮೆರಿಕದ ವಿದೇಶ, ರಕ್ಷಣಾ ಸಚಿವರುಗಳು ಶುಕ್ರವಾರ ಚರ್ಚೆ ನಡೆಸಲಿದ್ದು ಈ ದಿನಗಳಲ್ಲಿ ದೇಶಾದ್ಯಂತ ಪ್ರತಿಭಟನೆಯನ್ನು ನಡೆಸುವಂತೆ ಸಿಪಿಎಂ, ಸಿಪಿಐ, ಆರ್ಎಸ್ಪಿ, ಪಾವರ್ಡ್ ಬ್ಲಾಕ್, ಸಿಪಿಐ-ಎಂಎಲ್ ಕರೆ ನೀಡಿದೆ.
ದಿಲ್ಲಿಗೆ ಚರ್ಚೆಗೆ ಅಮೆರಿಕಾ ವಿದೇಶ ಕಾರ್ಯದರ್ಶಿ ಆಂಟನಿ ಬ್ಲಿಂಕನ್, ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಬರುತ್ತಿದ್ದಾರೆ. ಅವರು ನಮ್ಮ ವಿದೇಶ ಸಚಿವ ಜೈಶಂಕರ್ ಮತ್ತು ರಕ್ಷಣಾ ಸಚಿವ ರಾಜನಾಥ ಸಿಂಗ್ರೊಂದಿಗೆ ಚರ್ಚೆ ನಡೆಸಲಿದ್ದಾರೆ.