ಕೇರಳಕ್ಕೆ ಜೂನ್ ಆರರಿಂದ ಮಾನ್ಸೂನ್ ಮಳೆ ಪ್ರವೇಶ- ಹವಾಮಾನ ಇಲಾಖೆ

0
2027

ತಿರುವನಂತಪುರಂ,ಮೇ 15: ಕೇರಳಕ್ಕೆ ಈ ಬಾರಿ ಜೂನ್ ಆರರಂದು ಮಳೆ ಅರಂಭವಾಗಲಿದೆ ಎಂದು ಹವಾಮಾನ ನಿರೀಕ್ಷಣಾ ಕೇಂದ್ರ ತಿಳಿಸಿದೆ. ದಕ್ಷಿಣ ಕರಾವಳಿಯಲ್ಲಿ ಭಾರತಕ್ಕೆ ಮಾನ್ಸೂನ್ ಮಾರುತ ಪ್ರವೇಶಸಲಿದೆ. ಜೂನ್ ಆರಕ್ಕೆ ಕೇರಳದಲ್ಲಿ ಮಾನ್ಸೂನ್ ಆರಂಭವಾಗುತ್ತದೆ. ದೇಶದ ಕೃಷಿ ವ್ಯವಸ್ಥೆಯ ಅಸ್ತಿತ್ವದ ಉಳಿವುಗೆ ಮಾನ್ಸೂನ್ ಮಳೆ ಅತ್ಯವಶ್ಯಕವಾಗಿದೆ. ಆದರೆ ಮಾನ್ಸೂನ್ ಜೂನ್ ನಾಲ್ಕರಂದೆ ಭಾರತ ಪ್ರವೇಶಿಸುವುದು ಎಂದು ನೊಯಿಡದ ಖಾಸಗಿ ಹವಮಾನ ನಿರೀಕ್ಷಣಾ ಏಜೆನ್ಸಿ ಸ್ಕೈಮೆಟ್ ಕಳೆದ ದಿವಸ ಹೇಳಿತ್ತು. ಈ ವರ್ಷ ದೇಶಕ್ಕೆ ಸರಾಸರಿ 93 ಶೇಕಡ ಮಳೆ ಲಭಿಸಲಿದೆ.