ಸನ್ಮಾರ್ಗ ವಾರ್ತೆ
ಪಣಜಿ: ಗೋವಾ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ನಿರಾಕರಿಸಲ್ಪಟ್ಟಿದ್ದ ದಿವಂಗತ ಮನೋಹರ್ ಪಾರಿಕ್ಕರ್ ಪುತ್ರ ಉತ್ಪಲ್ ಪಾರಿಕರ್ ಗೆಲುವಿನಡೆಗೆ ದಾಪುಗಾಲಿಡುತ್ತಿದ್ದಾರೆ. ಪಣಜಿಯಿಂದ ಅವರಿಗೆ ಶಿವಸೇನೆ-ಎನ್ಸಿಪಿ ಸಖ್ಯ ಬೆಂಬಲ ನೀಡಿತ್ತು. ಉತ್ಪಲ್ ಆರಂಭದಿಂದಲೇ ಮುನ್ನಡೆಯಲ್ಲಿದ್ದರು.
ಇದೇ ವೇಳೇ ಸಾಂಕ್ವಿಲಂ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹಿನ್ನಡೆ ಅನುಭವಿಸುತ್ತಿದ್ದಾರೆ. ಪಣಜಿಯಲ್ಲಿ ಪಾರಿಕ್ಕರ್ ಮುನ್ನಡೆ ಬಿಜೆಪಿಗೆ ಬಹುದೊಡ್ಡ ಹಿನ್ನಡೆಯೆಂದು ಹೇಳಲಾಗುತ್ತಿದ್ದು, ಉತ್ಪಲ್ ಬಿಜೆಪಿಯಿಂದ ಪಣಜಿ ಕ್ಷೇತ್ರದಿಂದ ಸ್ಪರ್ಧಿಸುವ ಬಯಕೆ ವ್ಯಕ್ತಪಡಿಸಿದ್ದರು ಆದರೆ, ಬಿಜೆಪಿ ಅವರ ಬೇಡಿಕೆಯನ್ನು ನಿರಾಕರಿಸಿತ್ತು.