ಪ್ರಜಾಪ್ರಭುತ್ವದ ಸಿಪಾಯಿಗಳು ಗೆದ್ದೇ ಮರಳುತ್ತಾರೆ: ಅಖಿಲೇಶ್ ಯಾದವ್ ಟ್ವೀಟ್

0
313

ಸನ್ಮಾರ್ಗ ವಾರ್ತೆ

ಉತ್ತರಪ್ರದೇಶ: ವಿಧಾನಸಭೆಯ ಪ್ರಥಮ ಹಂತದ ಚುನಾವಣೆ ಫಲಿತಾಂಶದ ನಂತರವೂ ಅಖಿಲೇಶ್ ಯಾದವ್‍ರಲ್ಲಿ ಗೆಲ್ಲುವ ಆತ್ಮವಿಶ್ವಾಸ ಇದೆ. ಮತ ಯಂತ್ರಗಳನ್ನು ಬಿಜೆಪಿ ತಿರುಚಿದೆ. ಮತಗಟ್ಟೆ ಇಟ್ಟ ಸ್ಥಳಕ್ಕೆ ಕಾವಲು ನಿಂತ ಕಾರ್ಯಕರ್ತರಿಗೆ ಅವರು ಕೃತಜ್ಞತೆ ಹೇಳಿದ್ದು ಪ್ರಜಾಪ್ರಭುತ್ವದ ಸಿಪಾಯಿಗಳು ಗೆದ್ದೇ ಮರಳುತ್ತಾರೆ ಎಂದು ಟ್ವೀಟ್ ಮಾಡಿದ್ದಾರೆ.

ಮತದಾನ ಕೇಂದ್ರದಿಂದ ಪ್ರಜಾಪ್ರಭುತ್ವ ಸಿಪಾಯಿಗಳು ಗೆದ್ದು ಮರಳುತ್ತಾರೆ. ಎಕ್ಸಿಟ್ ಪೋಲ್ ಬಿಜೆಪಿಗೆ ಅಧಿಕಾರ ಸಿಗುವುದನ್ನು ತೋರಿಸಿತ್ತು. ಆದರೂ ಅಖಿಲೇಶ್ ಈಗಲೂ ಗೆಲುವಿನ ಕುರಿತು ಮಾತಾಡುತ್ತಿರುವುದು ವಿಶೇಷಾಗಿದೆ. ಬಿಜೆಪಿ ಈಗ ಸಮಾಜವಾದಿ ಪಾರ್ಟಿಗಿಂತ ದೊಡ್ಡ ಮಾರ್ಜಿನಲ್ಲಿ ಮುಂದಿದೆ. ಆದರೆ, ಇದೇ ವೇಳೆ ಸ್ವಲ್ಪಮಟ್ಟದ ಬದಲಾವಣೆ ಕಾಣಿಸಿದ್ದು ಎಸ್ಪಿಯ ಸೀಟುಗಳ ಸಂಖ್ಯೆ ಹೆಚ್ಚಿದ ವೇಳೆ ಅವರು ಟ್ವೀಟ್ ಮಾಡಿದರು. ಮೊದಲ ಹಂತದಲ್ಲಿ ಎರಡು ಪಾರ್ಟಿಗಳ ನಡುವೆ 30-35 ಸೀಟುಗಳ ಅಂತರವಿತ್ತು.