ಸನ್ಮಾರ್ಗ ವಾರ್ತೆ
ಹೊಸದಿಲ್ಲಿ, ಡಿ. 29: ಮಹಾ ಘಟ್ಬಂಧನ್ ತೊರೆದು ಪುನಃ ಬಿಜೆಪಿ ಜೊತೆಗೆ ಹೋದ ನಿತೀಶ್ ಕುಮಾರ್ ಕುರಿತು ಶಿವಸೇನೆ ಉದ್ಧವ್ ವಿಭಾಗದ ನಾಯಕ ಸಂಜಯ್ ರಾವತ್ ಪ್ರತಿಕ್ರಿಯಿಸಿದ್ದು, ಅವರಿಗೆ ಮರೆಗುಳಿತನದಿಂದ ಯಾವ ಪಾರ್ಟಿ ಪಕ್ಷದಲ್ಲಿದ್ದೆ ಎಂದು ಗೊತ್ತಾಗುತ್ತಿಲ್ಲ ಎಂದು ಸಂಜಯ್ ರಾವತ್ ಹೇಳಿದರು.
ಅವರಿಗೆ ಮರಗುಳಿತ ಬಾಧಿಸಿದಂತೆ ಅನಿಸುತ್ತಿದೆ. ಸರಿಯಾಗಿ ಮದ್ದು ತೆಗೆದುಕೊಳ್ಳಬೇಕು. ಆಗ ಬಹುತೇಕ ಅವರಿಗೆ ತಾನು ಬಿಜೆಪಿಗೆ ಸೇರಿದ್ದು ಅರ್ಥವಾಗಬಹುದು. ಇದು ಗೊತ್ತಾದ ಮೇಲೆ ಇಂಡಿಯ ಸಖ್ಯಕ್ಕೆ ಮರಳಿ ಬರಲೂ ಬಹುದು. ಈ ರೋಗ ದೇಶಕ್ಕೆ, ಪ್ರಜಾಪ್ರಭುತ್ವಕ್ಕೆ, ರಾಜಕೀಯಕ್ಕೆ ಹೆಚ್ಚು ಪ್ರಯಾಸಕರವಾಗಿದೆ ಎಂದು ರಾವತ್ ಹೇಳಿದರು.
ರವಿವಾರ ನಿತೀಶ್ ಕುಮಾರ್ ಜನತಾದಳ ಸಂಯುಕ್ತವನ್ನು ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದರು. ಒಂದೂವರೆ ವರ್ಷ ಮಹಾ ಸಖ್ಯದಲ್ಲಿ ಮುಖ್ಯಮಂತ್ರಿಯಾಗಿದ್ದ ಅವರು ಹಠಾತ್ತನೆ ಬಿಜೆಪಿ ಕಡೆಗೆ ಹೋದರು. ರಾಜ್ಯಪಾಲ ರಾಜೇಂದ್ರ ಸಿಂಗ್ ವಸತಿಗೆ ಬಂದು ರಾಜೀನಾಮೆ ಪತ್ರ ನೀಡಿ ಪುನಃ ಎನ್ಡಿಎ ಸಖ್ಯದ ಬೆಂಬಲದಿಂದ ಮುಖ್ಯಮಂತ್ರಿಯಾಗಿದ್ದಾರೆ.