ಪ್ರಚಾರಕ್ಕೆ ಹಣ ಇಲ್ಲ: ಸ್ಪರ್ಧೆಯಿಂದ ಹಿಂದೆ ಸರಿದ ಕಾಂಗ್ರೆಸ್ಸಿನ ಪುರಿಯ ಅಭ್ಯರ್ಥಿ ಸುಚರಿತಾ ಮೊಹಂತಿ

0
171

ಸನ್ಮಾರ್ಗ ವಾರ್ತೆ

ಭುವನೇಶ್ವರ: ಪ್ರಚಾರಕ್ಕೆ ಪಾರ್ಟಿ ಹಣ ಕೊಡುವುದಿಲ್ಲ. ಆರ್ಥಿಕ ಭಾರ ಹೊರಲು ಆಗುತ್ತಿಲ್ಲ, ಸರಿಯಾಗಿ ಪ್ರಚಾರ ನಡೆಸಲು ಸಾಧ್ಯವಾಗಿಲ್ಲ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‍ಗೆ ಪತ್ರ ಬರೆದು ಪುರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯಥಿ ಸುಚರಿತಾ ಮೊಹಂತಿ ಹಿಂದೆ ಸರಿದಿದ್ದಾರೆ.

ಲೋಕಸಭಾ ಕ್ಷೇತ್ರದಲ್ಲಿ ಏಳು ವಿಧಾನ ಸಭಾ ಸೀಟುಗಳಿವೆ. ಇಲ್ಲಿಯೂ ಚುನಾವಣೆ ನಡೆಯುತ್ತಿದೆ. ಬಿಜೆಪಿಯಿಂದ ಸಂಬೀತ್ ಪಾತ್ರ, ಬಿಜೆಡಿಯಿಂದ ಅರೂಪ್ ಪಟ್ನಾಯಿಕ್ ಪುರಿ ಲೋಕಸಭಾ ಕ್ಷೇತ್ರದ ಇತರ ಅಭ್ಯರ್ಥಿಗಳಾಗಿದ್ದಾರೆ. ಇವರು ಇಷ್ಟರಲ್ಲೇ ನಾಮಪತ್ರ ಸಲ್ಲಿಸಿದ್ದಾರೆ.

ಸಾರ್ವಜನಿಕರಿಂದ ಹಣ ಸಂಗ್ರಹಿಸವುದು. ಗರಿಷ್ಠ ಖರ್ಚು ಮಾಡುವುದಕ್ಕೆ ಪ್ರಯತ್ನಿಸುತ್ತಿದ್ದರೂ ಪ್ರಚಾರ ಮುಂದೆ ಕೊಂಡುಹೋಗಲು ಆಗುತ್ತಿಲ್ಲ. ನನಗೆ ಪಾರ್ಟಿ ಹಣ ಕೊಡುವುದಿಲ್ಲ. ಬಿಜೆಪಿ, ಬಿಜೆಡಿಗೆ ಹಣದ ಖಜಾನೆಯಿದೆ. ಎಲ್ಲ ಕಡೆ ಅವರು ಹಣ ಬಾಚಿ ಬಾಚಿ ಖರ್ಚು ಮಾಡುತ್ತಿದ್ದಾರೆ. ಈ ರೀತಿಯಲ್ಲಿ ತನ್ನಿಂದ ಸ್ಪರ್ಧಿಸಲು ಸಾಧ್ಯವಿಲ್ಲ. ವಿಧಾನಸಭೆಗೆ ಕಾಂಗ್ರೆಸ್ ದುರ್ಬಲ ಅಭ್ಯರ್ಥಿಗಳನ್ನು ನಿಲ್ಲಿಸಿದೆ ಎಂದು ಸುಚರಿತಾ ಆರೋಪಿಸಿದರು.

ಬಿಜೆಪಿ ಸರಕಾರ ಕಾಂಗ್ರೆಸ್ ಅನ್ನು ಆರ್ಥಿಕವಾಗಿ ಮುಗ್ಗಟ್ಟಿನಲ್ಲಿ ಸಿಲುಕಿಸಿದೆ. ನನಗೆ ಜನರ ನಡುವೆ ಹೋಗಿ ಪ್ರಚಾರ ಮಾಡಬೇಕಾಗಿದೆ. ಪಾರ್ಟಿ ಫಂಡಿಲ್ಲ. ಇದು ಕಷ್ಟವಾಗುತ್ತಿದೆ ಎಂದು ಸುಚರಿತಾ ಹೇಳಿದರು.

LEAVE A REPLY

Please enter your comment!
Please enter your name here