ಸನ್ಮಾರ್ಗ ವಾರ್ತೆ
ಜೈಪುರ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಹಣ ಸಂಗ್ರಹಿಸುವ ಕಾರ್ಯಕ್ಕೆ ಕಾಂಗ್ರೆಸ್ ವಿದ್ಯಾರ್ಥಿ ಸಂಘಟನೆ ಎನ್ಎಸ್ಯುಐ ನಡೆಸುವ ಏಕ್ ರೂಪ್ಯ ರಾಮ್ ಕೆ ನಾಮ್ ಎಂಬ ಹೆಸರಿನ ಯಜ್ಞವನ್ನು ಎನ್ಎಸ್ಯುಎ ರಾಜಸ್ಥಾನ ಅಧ್ಯಕ್ಷ ಅಭಿಶೇಕ್ ಚೌಧರಿ ಮಂಗಳವಾರ ಜೈಪುರದ ಕಾಮರ್ಸ್ ಕಾಲೇಜಿನಲ್ಲಿ ಉದ್ಘಾಟಿಸಿ ಚಾಲನೆ ನೀಡಿದ್ದಾರೆ.
ಬಿಜೆಪಿ,ಎಬಿವಿಪಿ ರಾಮ ಮಂದಿರಕ್ಕೆ ಹಣ ಸಂಗ್ರಹದ ಹೆಸರಿನಲ್ಲಿ ಜನರನ್ನು ಕೊಳ್ಳೆ ಹೊಡೆಯುತ್ತಿದೆ ಎಂದು ಅಭಿಶೇಕ್ ಚೌಧರಿ ಅಭಿಪ್ರಾಯ ವ್ಯಕ್ತಪಡಿಸಿದರು. ಆದರೆ ಎನ್ಎಸ್ಯು ನಡೆಸುವ ಈ ಕಾರ್ಯದ ಬಗ್ಗೆ ನಮಗೆ ಗೊತ್ತಿಲ್ಲ ರಾಷ್ಟ್ರೀಯ ಖಜಾಂಚಿ ಪವನ್ ಬನ್ಸಾಲ್ ತಿಳಿಸಿದರು. ಧನ ಸಂಗ್ರಹಿಸಲು ತನ್ನ ಬಳಿಗೆ ಬಂದಿದ್ದರೂ ನಾನು ಸಹಕರಿಸಿಲ್ಲ ಎಂದು ಬನ್ಸಾಲ್ ಹೇಳಿದರು.
ವಿದ್ಯಾರ್ಥಿಗಳಿಂದ ಹಣ ಸಂಗ್ರಹಿಸುವ ಅಭಿಯಾನದ ಮೊದಲ ದಿವಸವೇ ಕಾರ್ಯಕರ್ತರು ವಿದ್ಯಾರ್ಥಿಗಳಿಂದ ಧನ ಸಂಗ್ರಹ ನಡೆಸಿದರು. ಹದಿನೈದು ದಿನಗಳ ಯಜ್ಞದಲ್ಲಿ ರಾಜ್ಯದ ಎಲ್ಲ ಕಾಲೇಜುಗಳಲ್ಲಿಯೂ ಧನ ಸಂಗ್ರಹ ಮಾಡಲಾಗುವುದು. ದೊರೆತ ಹಣವನ್ನು ಅಯೋಧ್ಯೆಯ ರಾಮ ಮಂದಿರ ನಿರ್ಮಾಣಾಧಿಕಾರಿಗಳಿಗೆ ಒಪ್ಪಿಸಲು ತೀರ್ಮಾನಿಸಲಾಗಿದೆ ಎಂದು ಎನ್ಎಸ್ಯುಐ ವಕ್ತಾರ ರಮೇಶ್ ಭಾಟಿ ತಿಳಿಸಿದ್ದಾರೆ.