ಸನ್ಮಾರ್ಗ ವಾರ್ತೆ
ಅಭಿಪ್ರಾಯ
ಶಮೀರ ಜಹಾನ್ ಮಂಗಳೂರು
ಕೋವಿಡ್ 19 ನಿಯಂತ್ರಿಸುವ ಸಲುವಾಗಿ ಮುನ್ನೆಚ್ಚರಿಕೆ ಎಂಬ ನೆಲೆಯಲ್ಲಿ ಲಾಕ್ ಡೌನ್ ವಿಧಿಸಿರುವುದು ಸರಕಾರದ ಮಹತ್ವದ ಹೆಜ್ಜೆ ಎಂಬುದರಲ್ಲಿ ಸಂದೇಹವಿಲ್ಲ. ಈ ಸಂದರ್ಭ ಧರ್ಮ ಬೇಧ ಮರೆತು ಕೆಲವು ಸಂಘ ಸಂಸ್ಥೆಗಳು ಜನರ ಹಸಿವಿಗೆ ಸ್ಪಂದಿಸುವ ಮೂಲಕ ಸರಕಾರಕ್ಕೆ ಸಹಕಾರ ನೀಡುತ್ತಿರುವುದು ಗಮನಾರ್ಹವಾಗಿದೆ. ಕೆಲವು ಕಿಡಿಗೇಡಿಗಳು ಇದನ್ನು ಕೋಮುದ್ರುವೀಕರಣಕ್ಕೆ ಬಳಸುತ್ತಿರುವುದು ಮೂರ್ಖತನವಲ್ಲದೆ ಬೇರೇನೂ ಅಲ್ಲ. ಮಾನ್ಯ ಪ್ರಧಾನ ಮಂತ್ರಿಯವರು ಮನೆಯಲ್ಲಿದ್ದು ದೀಪ ಹಚ್ಚುವವರಿಗಿಂತ ಬೀದಿಗಿಳಿದು ಜನಸೇವೆ ಮಾಡಿದ ಸಂಘಸಂಸ್ಥೆಗಳನ್ನು ಈ ಸಂದರ್ಭ ಅಭಿನಂದಿಸಲೇಬೇಕು. ಜನಸೇವೆಯೇ ನಿಜವಾದ ದೇಶಸೇವೆ ಎಂಬ ಸಂದೇಶವನ್ನು ರವಾನಿಸಬೇಕು. ಸಂಸ್ಥೆಗಳನ್ನು ಸನ್ಮಾನಿಸುವ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡಬೇಕು.
ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.