ಸನ್ಮಾರ್ಗ ವಾರ್ತೆ
ಹೊಸದಿಲ್ಲಿ,ಡಿ.30: ಮಧ್ಯಾಹ್ನ ಎರಡು ಗಂಟೆಗೆ ರೈತರು ಎರಡನೇ ಘಟ್ಟದ ಚರ್ಚೆ ನಡೆಸಲಿದ್ದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನರೇಂದ್ರ ಮೋದಿಯನ್ನು ವ್ಯಂಗ್ಯವಾಡಿದ್ದಾರೆ.
ಸುಳ್ಳು ಭರವಸೆ ನೀಡುವ ನರೇಂದ್ರ ಮೋದಿಯವರ ಬಗ್ಗೆ ರೈತರು ನಂಬಲಾರರು ಎಂದು ರಾಹುಲ್ ಗಾಂಧಿ ಫೇಸ್ಬುಕ್ನಲ್ಲಿ ಬರೆದಿದ್ದಾರೆ. ಎಲ್ಲ ಬ್ಯಾಂಕ್ಗಳಲ್ಲಿ 15 ಲಕ್ಷ, ಎಲ್ಲ ವರ್ಷವೂ 2 ಕೋಟಿ ಉದ್ಯೋಗ, 59 ದಿನ ಕೊಡಿ ಇಲ್ಲದಿದ್ದರೆ ಆತ್ಮಹತ್ಯೆ ಮಾಡುತ್ತೇನೆ. ಕೊರೋನ ವಿರುದ್ಧ ಯುದ್ಧದಲ್ಲಿ ನಾವು 21 ದಿವಸಗಳಲ್ಲಿ ಗೆಲ್ಲುತ್ತೇವೆ. ಯಾರೂ ನಮ್ಮ ಪ್ರದೇಶಕ್ಕೆ ನುಸುಳಿಲ್ಲ, ಏನೂ ಮಾಡಿಲ್ಲ ಎಂಬಿತ್ಯಾದಿ ಮೋದಿಯವರ ಹೇಳಿಕೆಗಳನ್ನು ರಾಹುಲ್ ಗಾಂಧಿ ನೆನಪಿಸಿದ್ದಾರೆ.
ಪ್ರಧಾನಿಯ ಸುಳ್ಳುಗಳ ದೀರ್ಘ ಚರಿತ್ರೆ ತಿಳಿದಿರುವ ರೈತರು ಮೋದಿಯನ್ನು ನಂಬಲಾರರು ಎಂದು ರಾಹುಲ್ ಹೇಳಿದರು.
ಚರ್ಚೆಯಲ್ಲಿ ತಮ್ಮ ಅಜೆಂಡಾದಲ್ಲಿ ಬದಲಾವಣೆ ಇಲ್ಲ ಎಂದು ರೈತರು ತಿಳಿಸಿದ್ದಾರೆ. ಇದನ್ನು ಮೊದಲೇ ಸರಕಾರಕ್ಕೆ ರೈತ ಸಂಘಟನೆಗಳು ತಿಳಿಸಿವೆ.