ದೆಹಲಿಯ ಆನಂದ ವಿಹಾರ ರೈಲ್ವೆ ನಿಲ್ದಾಣದಲ್ಲಿ ಸ್ವತಃ ಕೂಲಿಯಾಗಿ ಕೂಲಿ ಕಾರ್ಮಿಕರ ಸಮಸ್ಯೆ ಆಲಿಸಿದ ರಾಹುಲ್ ಗಾಂಧಿ

0
2854

ಸನ್ಮಾರ್ಗ ವಾರ್ತೆ

ನವ ದೆಹಲಿ: ಆನಂದ್ ವಿಹಾರ್ ರೈಲು ನಿಲ್ದಾಣಕ್ಕೆ ಇಂದು ಬೆಳ್ಳಂಬೆಳಗ್ಗೆ (ಸೆಪ್ಟೆಂಬರ್ 21) ಭೇಟಿ ನೀಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಅಲ್ಲಿನ ಹಮಾಲಿಗಳ ಜತೆ ಕಾಲ ಕಳೆದರು.

ಕೂಲಿ ಕಾರ್ಮಿಕರ ಭೇಟಿಯ ಸಮಯದಲ್ಲಿ, ಅವರೊಂದಿಗೆ ದಿನನಿತ್ಯ ನಡೆಯುವ ಕೆಲಸ ಕಾರ್ಯಗಳು ಹಾಗೂ ಅವರು ಎದುರಿಸುತ್ತಿರುವ ಸವಾಲುಗಳ ಬಗ್ಗೆ ಚರ್ಚಿಸಿದರು.

ಒಗ್ಗಟ್ಟಿನ ಪ್ರದರ್ಶನಕ್ಕಾಗಿ ಕಾರ್ಮಿಕರ ಜತೆ ರಾಹುಲ್ ಕೂಡಾ ಕೂಲಿ ಉಡುಪನ್ನು ಧರಿಸಿ ತಲೆಯ ಮೇಲೆ ಹೊರೆಯೊಂದನ್ನು ಹೊತ್ತು ಒಂದಷ್ಟು ದೂರ ಸಾಗಿದರು.

ಇತ್ತೀಚೆಗೆ, ರೈಲ್ವೆ ನಿಲ್ದಾಣದ ಹಮಾಲಿ ಸ್ನೇಹಿತರು ಕಾಂಗ್ರೆಸ್ ನಾಯಕನನ್ನು ಭೇಟಿ ಮಾಡುವ ಬಹುದಿನಗಳ ತಮ್ಮ ಆಸೆ ವ್ಯಕ್ತಪಡಿಸಿದ ನಂತರ ರಾಹುಲ್‌ ಭೇಟಿ ಮಾಡಿದ್ದಾರೆ. ತಮ್ಮ ಹಮಾಲಿ ಸ್ನೇಹಿತರ ಜೊತೆ ಒಂದಷ್ಟು ಹೊತ್ತು ಕಾಲ ಕಳೆದು ಕಷ್ಟ ಸುಖಗಳನ್ನು ಹಂಚಿಕೊಂಡರು. ಭಾರತ ಒಗ್ಗೂಡಿಸುವಿಕೆ ಮುಂದುವರಿಯುತ್ತದೆ” ಎಂದು ಕಾಂಗ್ರೆಸ್ ಟ್ವಟರ್‌ನಲ್ಲಿ ಮಾಹಿತಿ ಹಂಚಿಕೊಂಡಿದೆ.