ಆಗಸ್ಟ್ 14ಕ್ಕೆ ಶಶಿಕಲಾ ಬಿಡುಗಡೆ; ಬಿಜೆಪಿ ನಾಯಕನಿಂದ ಟ್ವೀಟ್

0
440

ಸನ್ಮಾರ್ಗ ವಾರ್ತೆ

ಬೆಂಗಳೂರು,ಜೂ.27: ಮಾಜಿ ತಮಿಳ್ನಾಡು ಮುಖ್ಯಮಂತ್ರಿ ಜಯಲಲಿತಾರ ಗೆಳತಿಯಾಗಿರುವ ವಿಕೆ ಶಶಿಕಲಾ ಆಗಸ್ಟ್ 14ಕ್ಕೆ ಜೈಲಿನಿಂದ ಬಿಡುಗಡೆಗೊಳ್ಳುವರೆಂದು ಬಿಜೆಪಿ ನಾಯಕ ಡಾ. ಅಸೀರ್ವತಂ ಆಚಾರಿ ಟ್ವೀಟ್ ಮಾಡಿದ್ದಾರೆ. 2017 ಫೆಬ್ರುವರಿ 15ಕ್ಕೆ ಅವರು ಜೈಲು ಪಾಲಾಗಿದ್ದರು. ನಾಲ್ಕು ವರ್ಷದ ಜೈಲು ವಾಸ ಮುಗಿಯುವುದರಿಂದ ಆಗಸ್ಟ್ 14ಕ್ಕೆ ಅವರು ಬಿಡುಗಡೆಗೊಳ್ಳುತ್ತಾರೆ ಎಂದು ಬಿಜೆಪಿ ನಾಯಕ ಟ್ವೀಟ್ ಮಾಡಿದ್ದಾರೆ.

ಅನಧಿಕೃತವಾಗಿ ಆಸ್ತಿ ಸಂಪಾದಿಸಿದ ಪ್ರಕರಣದಲ್ಲಿ ಶಶಿಕಲಾ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದ ಹೆಚ್ಚಿನ ವಾರ್ತೆಗಳಿಗೆ ಕಾಯಿರಿ ಎಂದು ಬಿಜೆಪಿ ನಾಯಕ ಟ್ವೀಟ್ ಮಾಡಿದ್ದಾರೆ.

ಶಶಿಕಲಾ ಪತಿ ನಟರಾಜ್‍ರು ಅಸೌಖ್ಯಕ್ಕಾಗಿ 2017ರಲ್ಲಿ ಐದು ದಿವಸದ ಪರೋಲ್ ಸಿಕ್ಕಿತ್ತು. 2019ರ ಮಾರ್ಚಿನಲ್ಲಿ ನಟರಾಜನ್ ನಿಧನರಾದ್ದರಿಂದ 12 ದಿವಸದ ಪರೋಲ್ ಸಿಕ್ಕಿತ್ತು. ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯಲಿದ್ದು, ಶಶಿಕಲಾರ ಮರಳುವಿಕೆಯು ತಮಿಳ್ನಾಡು ರಾಜಕೀಯದಲ್ಲಿ ಬದಲಾವಣೆಯ ಗಾಳಿ ಬೀಸಲಿದೆ ಎಂದು ಚರ್ಚೆಯಾಗುತ್ತಿದೆ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.