ನಾಡು ಕಂಡ ಶ್ರೇಷ್ಠ ಸಂತ, ತನ್ನ ಮನಮುಟ್ಟುವ ಪ್ರವಚನಗಳಿಂದ ಲಕ್ಷಾಂತರ ಜನರಿಗೆ ಮನುಷ್ಯತ್ವದ ಪಾಠಗಳನ್ನು ಹೇಳಿಕೊಟ್ಟ ಬಿಜಾಪುರದ ಸಿದ್ದೇಶ್ವರ ಶ್ರೀಗಳು ನಮ್ಮನ್ನಗಲಿದ್ದಾರೆ. ನುಡಿದಂತೆ ನಡೆದು, ಸರಳವಾಗಿ ಜೀವಿಸಿ ಅಧ್ಯಾತ್ಮದ ಬೆಳಕನ್ನು ಜನರಿಗೆ ನೀಡುತ್ತಿದ್ದ ಶ್ರೀಗಳ ಜೀವನವು ನಮಗೆ ದಾರಿದೀಪ ಎಂದು ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ರಾಜ್ಯ ರಾಜ್ಯ ಕಾರ್ಯದರ್ಶಿ ಮುಹಮ್ಮದ್ ಕುಂಞಿ ತಮ್ಮ ಸಂತಾಪವನ್ನು ಸೂಚಿಸಿದ್ದಾರೆ.
ಸಿದ್ದೇಶ್ವರ ಸ್ವಾಮೀಜಿಗಳು ಇಂದು ನಮ್ಮ ಮಧ್ಯೆ ಇಲ್ಲದಿದ್ದರೂ ತಮ್ಮ ಅಸಂಖ್ಯಾತ ಪ್ರವಚನಗಳ ಮೂಲಕ ಕೊಟ್ಟ ಬೆಳಕು , ತಮ್ಮ ಸರಳ ಮತ್ತು ನಿಷ್ಕಲ್ಮಶ ವ್ಯಕ್ತಿತ್ವದ ಮೂಲಕ ತೋರಿದ ದಾರಿ ನಮ್ಮೆದುರಿಗಿದೆ. ಶ್ರೀಗಳು ಅಧ್ಯಾತ್ಮ ಮತ್ತು ತತ್ವಶಾಸ್ತ್ರದ ಮಹಾನ್ ಚೇತನ. ಅವರು ಹೇಳಿಕೊಟ್ಟ ಮೌಲ್ಯಗಳು ನಾಡಿನ ಜನತೆಗೆ ದಾರಿದೀಪವಾಗಲಿದೆ ಎಂದು ಅವರು ಹೇಳಿದರು.