ಸನ್ಮಾರ್ಗ ವಾರ್ತೆ
ನಾರಾಯಣಪುರ,ಡಿ.4: ಛತ್ತೀಸ್ಗಡದ ಇಂಡೊ-ಟಿಬೆಟಿಯನ್ ಬಾರ್ಡರ್ ಪೊಲೀಸ್ ಸಿಬ್ಬಂದಿಗಳ ನಡುವೆ ನಡೆದ ಗುಂಡು ಹಾರಾಟದಲ್ಲಿ ಆರು ಮಂದಿ ಕೊಲ್ಲಲ್ಪಟ್ಟಿದ್ದಾರೆ. ಇಬ್ಬರು ಗಾಯಗೊಂಡಿದ್ದಾರೆ. ರಜೆಗೆ ಸಂಬಂಧಿಸಿದ ಕಲಹ ಪೊಲೀಸ್ ಸಿಬ್ಬಂದಿಗಳ ಒಳಗೆ ಜಗಳಕ್ಕೆ ಕಾರಣವಾಗಿತ್ತು. ಸಿಬ್ಬಂದಿಯೊಬ್ಬ ಸಹುದ್ಯೋಗಿಗೆ ಗಂಡು ಹಾರಿಸಿದ್ದ ಎನ್ನಲಾಗಿದೆ.
ಛತ್ತೀಸ್ಗಡದ ನಾರಾಯಣಪುರ ಜಿಲ್ಲೆಯಲ್ಲಿ ಘಟನೆ ನಡೆದಿದ್ದು, ಐಟಿಬಿಪಿಯ ಕ್ಯಾಂಪ್ನ 45ನೆ ಬೆಟಾಲಿಯನ್ನಲ್ಲಿ ಘರ್ಷಣೆ ನಡೆದಿತ್ತು. ಸಹೋದ್ಯೋಗಿಗಳಿಗೆ ಗುಂಡು ಹಾರಿಸಿದ ಸಿಬ್ಬಂದಿಯೂ ಕೊಲ್ಲಲ್ಪಟ್ಟಿದ್ದಾನೆ. ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ನಾರಾಯಣ ಪುರ ಪೊಲೀಸ್ ಸೂಪರಿಡೆಂಟ್ ಮೊಹಿತ್ ಗಾರ್ಗ್ ತಿಳಿಸಿದ್ದಾರೆ.