ಪಂಚ ರಾಜ್ಯಗಳ ಚುನಾವಣಾ ಸೋಲನ್ನು ಗಂಭೀರವಾಗಿ ತೆಗೆದುಕೊಳ್ಳಿ- ಸೋನಿಯಾ ಗಾಂಧಿ

0
344

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಇತ್ತೀಚೆಗೆ ನಡೆದ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‍ ಹೀನಾಯ ಪ್ರದರ್ಶನ ನೀಡಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯ ಗಾಂಧಿ ಐದು ರಾಜ್ಯಗಳ ಚುನಾವಣಾ ಸೋಲನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಕಾರ್ಯಕಾರಿಣಿ ಸಭೆಯಲ್ಲಿ ಹೇಳಿದ್ದಾರೆ.

“ನಮಗೆ ಯಾಕೆ ಹಿನ್ನಡೆ ಆಗಿದೆ ಎಂಬುದನ್ನು ಪರಿಶೀಲಿಸುವುದು ಮತ್ತು ಅದರ ಜೊತೆಗೆ ನಮ್ಮ ಮನೆಯನ್ನು ಕ್ರಮೀಕರಿಸಬೇಕು ಎಂದು ಕಾರ್ಯಕಾರಿಣಿಯಲ್ಲಿ ಸೋನಿಯಾ ಗಾಂಧಿ ಹೇಳಿದರು. ಸೋಲಿನ ಕಾರಣವನ್ನು ಮೊದಲು ಗುರುತಿಸಬೇಕಾಗಿದೆ. ಪಾರ್ಟಿ ನಿರಾಶಾದಾಯಕ ಪ್ರದರ್ಶನ ನೀಡಿದ್ದು, ಚುನಾವಣೆ ನಡೆದ ರಾಜ್ಯಗಳ ನಾಯಕರು ಇದಕ್ಕಿರುವ ಕಾರಣಗಳನ್ನು ಹೇಳುತ್ತಾರೆಂಬ ನಿರೀಕ್ಷೆ ತನಗೆ ಇದೆ ಎಂದು ಅವರು ಹೇಳಿದರು.

ಚುನಾವಣಾ ಸೋಲನ್ನು ಎಚ್ಚರಿಕೆಯಿಂದ ಅವಲೋಕಿಸಿ ವರದಿ ನೀಡಬೇಕೆಂದು ಸೋನಿಯಾ ಆಗ್ರಹಿಸಿದರು. ಕಾರ್ಯಕಾರಿಣಿ ಹೊಸ ಅಧ್ಯಕ್ಷರ ಆಯ್ಕೆಯ ಕುರಿತು ಚರ್ಚೆ ನಡೆಯಲಿದ್ದು, ಜೂನ್ 23ಕ್ಕೆ ಹೊಸ ಅಧ್ಯಕ್ಷರ ಆಯ್ಕೆ ನಡೆಸುವ ತೀರ್ಮಾನಕ್ಕೆ ಬರಲಾಗಿದೆ. ಜೂನ್ ಏಳರೊಳಗೆ ನಾಮಪತ್ರ ಸಲ್ಲಿಸಬೇಕು. ಕೆಲವು ನಾಯಕರು ವಿರೋಧ ಒಡ್ಡಿದ್ದರಿಂದ ಚುನಾವಣಾ ದಿನದ ವಿಷಯದಲ್ಲಿ ಅಂತಿಮ ತೀರ್ಮಾನ ಕೈಗೊಂಡಿಲ್ಲ.