ಸನ್ಮಾರ್ಗ ವಾರ್ತೆ
ಕಥೆಗಾರರಿಗೊಂದು ಸುವರ್ಣಾವಕಾಶ!!!
ಬರವಣಿಗೆ ನಿಮ್ಮದು… ಪ್ರೋತ್ಸಾಹ ನಮ್ಮದು…
ಬಹುಮಾನಗಳು:
▪️ಪ್ರಥಮ – 5000 ನಗದು ಮತ್ತು ಪ್ರಮಾಣ ಪತ್ರ
▪️ದ್ವಿತೀಯ – 3000 ನಗದು ಮತ್ತು ಪ್ರಮಾಣ ಪತ್ರ
▪️ತೃತೀಯ – 2000 ನಗದು ಮತ್ತು ಪ್ರಮಾಣ ಪತ್ರ
▪️ಆಯ್ದ ಹತ್ತು ಕಥೆಗಳಿಗೆ ಪ್ರೋತ್ಸಾಹವಾಗಿ 1000 ನಗದು ಮತ್ತು ಪ್ರಮಾಣ ಪತ್ರ ನೀಡಲಾಗುವುದು.
ನಿಯಮಗಳು:
- ಕಥೆಯು ಸ್ವಂತ ರಚನೆಯಾಗಿರಬೇಕು. ಕೃತಿಚೌರ್ಯ ಮತ್ತು ಅನುವಾದಿತ ಕಥೆಗಳನ್ನು ಪರಿಗಣಿಸಲಾಗುವುದಿಲ್ಲ.
- ಕಥೆಯು ಕನ್ನಡದಲ್ಲೇ ಬರೆಯಬೇಕು.
- ಒಬ್ಬರಿಗೆ ಒಂದೇ ಕಥೆ ಕಳುಹಿಸಲು ಅವಕಾಶ ಹಾಗೂ ಯಾವುದೇ ಕಾವ್ಯನಾಮದಿಂದ (Pen Name) ಕಥೆಯನ್ನು ಬರೆದಿರಬಾರದು.
- ಕಥೆಯು 600-800 ಪದಗಳ ಮಿತಿಯಲ್ಲಿರಬೇಕು.
- ಕಥೆಯಲ್ಲಿ ಮಕ್ಕಳಿಗೆ ಅನುಕೂಲವಾಗುವ ಭಾಷೆ, ಶೈಲಿ ಮತ್ತು ಮೌಲ್ಯಗಳಿಗೆ ಆದ್ಯತೆ ಪ್ರಾಶಸ್ತ್ಯ ನೀಡಬೇಕು.
- ಕಥೆಗಾರರಿಗೆ ಯಾವುದೇ ವಯೋಮಿತಿಯ ನಿರ್ಬಂಧ ಇರುವುದಿಲ್ಲ.
- ಕಥೆಯು ಹೊಸದಾಗಿರಬೇಕು. ಮಕ್ಕಳ ಕಥೆಯಾಗಿರಬೇಕು. ಯಾವುದೇ ಪತ್ರಿಕೆ, ಪುಸ್ತಕ ಅಥವಾ ಸಾಮಾಜಿಕ ಜಾಲತಾಣದಲ್ಲಿ ಪ್ರಕಟವಾಗಿರಬಾರದು.
- ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುವುದು.
- ಕಳುಹಿಸಿಕೊಟ್ಟಿರುವ ಕಥೆಗಳ ಪೂರ್ತಿ ಹಕ್ಕುಸ್ವಾಮ್ಯ ಆಯೋಜಕರಿಗೆ ಇರುವುದು.
- ಕಥೆ ಕಳುಹಿಸಲು ಕೊನೆಯ ದಿನಾಂಕ 2023 ಜುಲೈ 15 ನಂತರ ಬಂದ ಕಥೆಯನ್ನು ಸ್ಪರ್ಧೆಗೆ ಸ್ವೀಕರಿಸಲಾಗುವುದಿಲ್ಲ.
- ಕಥೆಗಳನ್ನು [email protected] ಗೆ ಮೈಲ್ ಮಾಡಬಹುದು (ಈಮೈಲ್ ನ subject ನಲ್ಲಿ ‘ಮಕ್ಕಳ ಕಥಾ ಸ್ಪರ್ಧೆ’ ಎಂದು ನಮೂದಿಸಿ) ಅಥವಾ ಕೆಳಗಿನ ವಿಳಾಸಕ್ಕೆ ಅಂಚೆಯ ಮೂಲಕ ಕಳುಹಿಸಿ ಕೊಡಬಹುದು.
- ಕಥೆಗಳನ್ನು ಕಳಿಸಲು ಯಾವುದೇ ಶುಲ್ಕವಿಲ್ಲ.ಕಥೆಯ ಜೊತೆಗೆ ನಿಮ್ಮ ಹೆಸರು, ಊರು ಮತ್ತು ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು.
• ಶಾಂತಿ ಪ್ರಕಾಶನ
ಬಾಲ ಸಾಹಿತ್ಯ ವಿಭಾಗ
ಸಹಕಾರಿ ಸದನ , ಮಿಷನ್ ಸ್ಟ್ರೀಟ್,
ಮಂಗಳೂರು -575001
Mob :
8867468444 |9449333496