ಸನ್ಮಾರ್ಗ ವಾರ್ತೆ
ಪಶ್ಚಿಮ ಬಂಗಾಳದಲ್ಲಿ ಅಧಿಕಾರಕ್ಕೆ ಬರುವ ಬಗ್ಗೆ ಗೃಹ ಸಚಿವ ಅಮಿತ್ ಶಾರವರು ಹಗಲುಗನಸು ಕಾಣುವುದನ್ನು ನಿಲ್ಲಿಸಬೇಕು ಎಂದು ಟಿಎಂಸಿ ಮುಖಂಡ ಸೌಗತ್ ರಾಯ್ ಹೇಳಿದ್ದಾರೆ.
2021ರ ಚುನಾವಣೆಯಲ್ಲಿ ತಮ್ಮ “ಸುವರ್ಣ ಬಂಗಾಳ” ಕನಸನ್ನು ಈಡೇರಿಸಲು ಬಿಜೆಪಿಗೆ ಅವಕಾಶ ನೀಡುವಂತೆ ಶಾ ರಾಜ್ಯದ ಜನರನ್ನು ಒತ್ತಾಯಿಸಿದ ನಂತರ ಅವರು ಈ ರೀತಿ ಪ್ರತಿಕ್ರಿಯಿಸಿದರು.
“ಅವರು ತಮ್ಮ ಪಕ್ಷವನ್ನು ಪಶ್ಚಿಮ ಬಂಗಾಳದಲ್ಲಿ ಒಗ್ಗೂಡಿಸುವತ್ತ ಗಮನ ಹರಿಸಬೇಕು ಯಾಕೆಂದರೆ ಅದು ವಿಭಜಿತ ಮನೆಯಾಗಿದೆ” ಎಂದು ರಾಯ್ ಹೇಳಿದರು.