ಸನ್ಮಾರ್ಗ ವಾರ್ತೆ
ಬಿ ಸಿ ರೋಡ್: ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಇದರ ಬಂಟ್ವಾಳ ವಿಧಾನ ಸಭಾ ಕ್ಷೇತ್ರ ಸಮಿತಿಯ ವತಿಯಿಂದ ಪರ್ಲಿಯಾದ ನಂದರಬೆಟ್ಟು ಪರಿಸರದ ಮಸೀದಿ ಮಂದಿರಗಳನ್ನೊಳಗೊಂಡು ಸುಮಾರು ಇನ್ನೂರಕ್ಕೂ ಮಿಕ್ಕಿದ ಮನೆಗಳಿಗೆ ಕೋವಿಡ್ ನಿರೋಧಕ ಔಷಧಗಳನ್ನು ಸಿಂಪಡಿಸಲಾಯಿತು.
ಪಕ್ಷದ ಪರ್ಲಿಯಾ ವಾರ್ಡ್ ಅಧ್ಯಕ್ಷ ಮುತ್ತಲಿಬ್ ನಂದರಬೆಟ್ಟು ಉದ್ಘಾಟಿಸುವ ಮೂಲಕ ಪ್ರಾರಂಭಿಸಿದರು. ಎರಡು ದಿನಗಳ ಕಾಲ ನಡೆದ ಈ ಔಷಧಿ ಸಿಂಪಡಿಸುವ ಕಾರ್ಯಕ್ರಮದಲ್ಲಿ ಪಕ್ಷದ ಬಂಟ್ವಾಳ ಬ್ಲಾಕ್ ಅಧ್ಯಕ್ಷ ಸಲೀಮ್ ಬೋಳಂಗಡಿ, ಕಾರ್ಯದರ್ಶಿ ಸಫ್ವಾನ್ ಪರ್ಲಿಯಾ, ಸಲಾಮ್ ಬೆಂಗ್ರೆ, ಇರ್ಫಾನ್, ಅಕ್ರಮ್, ನವೀದ್, ಸತ್ತಾರ್ ಗೂಡಿನ ಬಳಿ ಮುಂತಾದವರು ಭಾಗವಹಿಸಿದ್ದರು.