ರಾಮರಾಮ ಹೇಳದ್ದಕ್ಕೆ ದಲಿತ ಯುವಕನನ್ನು ಎತ್ತಿಕೊಂಡು ಹೋಗಿ ಕ್ರೂರವಾಗಿ ಥಳಿಸಿದ ಕಿಡಿಗೇಡಿಗಳು

0
155

ಸನ್ಮಾರ್ಗ ವಾರ್ತೆ

ಚಂಡಿಗಡ, ಆ.23: ರಾಮರಾಮ ಎಂದು ಹೇಳದ ಕಾರಣಕ್ಕಾಗಿ ದಲಿತ ಯುವಕನನ್ನುಅಪಹರಿಸಿ ಕ್ರೂರವಾಗಿ ಥಳಿಸಿದ ಘಟನೆಯು ಹರಿಯಾಣದ ರೊಹತಕ್ ಜಿಲ್ಲೆಯಲ್ಲಿ ನಿನ್ನೆ ನಡೆದಿದೆ. ಆದರೆ ಈವರೆಗೂ ಪೊಲೀಸರು ಆರೋಪಿಯನ್ನು ಬಂಧಿಸಿಲ್ಲ.

ಖಾರ ವಾರ್ಡ್ ಗ್ರಾಮದಲ್ಲಿನ ನಿವಾಸಿಯಾದ ದಲಿತ ಯುವಕನಿಗೆ ಕ್ರೂರವಾಗಿ ಹೊಡೆದದ್ದನ್ನು ಟಿವಿ9 ಭಾರತ ವರ್ಷ ವರದಿ ಮಾಡಿದೆ. ಗ್ರಾಮದ ಸರಪಂಚನ ಮಗ ದೀಪಕ್ ಎಂಬವರನ್ನು ಅವರ ಗೆಳೆಯರೇ ರಾಮ ರಾಮ ಎನ್ನದಿರುವುದಕ್ಕೆ ಥಳಿಸಿರುವುದಾಗಿ ದೂರು ನೀಡಲಾಗಿದೆ.

ರಸ್ತೆಯ ಬದಿಯಲ್ಲಿ ನಿಂತಿದ್ದ ನನ್ನ ಹತ್ತಿರಕ್ಕೆ ಕಾರಿನಲ್ಲಿ ಬಂದ ದೀಪಕ್ ಮತ್ತು ಗೆಳೆಯರು, ತನ್ನನ್ನು ನೋಡಿ ಯಾಕೆ ರಾಮರಾಮ ಎಂದು ಹೇಳಲಿಲ್ಲ ಎಂದು ಕೇಳಿದರು. ನಂತರ ಜಾತಿ ನಿಂದೆ ಮಾಡಿ ಥಳಿಸಿದರು ಎಂದು ಯುವಕ ದೂರಿನಲ್ಲಿ ತಿಳಿಸಿದ್ದು ದೀಪಕ್ ಜತೆ ಮೊನು ನಿತಿನ್ ವಿವೇಕ್ ಇದ್ದರು. ಇವರನ್ನು ಪೊಲೀಸರು ಗುರುತಿಸಿದ್ದಾರೆ. ಎಲ್ಲರನ್ನೂ ಬಂಧಿಸಲಾಗುವುದು ಎಂದು ಡಿಎಸ್ಪಿ ರಾಕೇಶ್ ಮಲಿಕ್ ತಿಳಿಸಿದ್ದಾರೆ. ಈವರೆಗೂ ಪೊಲೀಸರು ಯಾರನ್ನೂ ಬಂಧಿಸಿಲ್ಲ.