ಸನ್ಮಾರ್ಗ ವಾರ್ತೆ
ಹೊಸದಿಲ್ಲಿ,ಮೇ,6: ಪುಲಿಟ್ಝರ್ ಪ್ರಶಸ್ತಿ ಪಡೆದ ಕಾಶ್ಮೀರದ ಫೋಟೊ ಜರ್ನಲಿಸ್ಟ್ಗಳಾದ ದರ್ ಯಾಸಿನ್ ಮತ್ತು ಮುಖ್ತಾರ್ ಖಾನ್, ಚನ್ನಿ ಆನಂದ್ರನ್ನು ಅಭಿನಂದಿಸಿ ಟ್ವೀಟ್ ಮಾಡಿದ ರಾಹುಲ್ ಗಾಂಧಿಗೆ ಬಿಜೆಪಿ ದೇಶದ್ರೋಹಿ ಎಂದಿದೆ.
ಕಾಶ್ಮೀರ ಭಾರತದ ಅವಿಭಾಜ್ಯ ಘಟಕವಲ್ಲ ಎಂಬ ರಾಹುಲ್ರ ಅಭಿಪ್ರಾಯ ಸೋನಿಯಾ ಹಾಗೂ ಕಾಂಗ್ರೆಸ್ ಇದೆಯೇ ಎಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಆರೋಪಿಸಿದರು.
ಕಾಶ್ಮೀರವನ್ನು ವಿವಾದ ಪ್ರದೇಶವಾಗಿ ಪ್ರಚಾರ ಮಾಡಿದವರನ್ನು ರಾಹುಲ್ ಅಭಿನಂದಿಸಿದ್ದಾರೆ. ರಾಹುಲ್ ದೇಶದ್ರೋಹಿ ಎಂಬ ರೀತಿಯ ಪ್ರಚಾರವನ್ನು ಬಿಜೆಪಿ ಟ್ವೀಟ್ ಮಾಡಲು ಆರಂಭಿಸಿದೆ.
ಜಮ್ಮು-ಕಾಶ್ಮೀರದ ನೇರ ದೃಶ್ಯವನ್ನು ಚಿತ್ರಿಸಿದಕ್ಕಾಗಿ ಪುಲಿಟ್ಝರ್ ಪ್ರಶಸ್ತಿ ಫೋಟೊಗ್ರಾಫರ್ಗಳಿಗೆ ಲಭಿಸಿದೆ. ಭಾರತದ ಫೋಟೊ ಜರ್ನಲಿಸ್ಟ್ಗಳನ್ನು ಅಭಿನಂದಿಸುತ್ತೇವೆ. ನೀವು ನಮಗೆ ಗೌರವ ತಂದಿರಿ ಎಂದು ರಾಹುಲ್ ಟ್ವೀಟ್ ಮಾಡಿದ್ದರು.
ಓದುಗರೇ, ಸನ್ಮಾರ್ಗ ಪೇಸ್ಬುಕ್ ಪೇಜ್ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.