ಸನ್ಮಾರ್ಗ ವಾರ್ತೆ
ಲಕ್ನೊ,ಅ.19: ಕಮಲೇಶ್ ತಿವಾರಿಯ ಕೊಲೆ ಪಾತಕದಲ್ಲಿ ಬಿಜೆಪಿ ನಾಯಕನ ಪಾತ್ರ ಇದೆಯೆಂದು ತಿವಾರಿಯ ತಾಯಿ ಹೇಳಿದ್ದಾರೆ. ಶಿವಕುಮಾರ್ ಗುಪ್ತ ಎಂಬ ಬಿಜೆಪಿ ನಾಯಕ ತಿವಾರಿ ಕೊಲೆಯಲ್ಲಿ ಭಾಗಿಯಾಗಿದ್ದಾನೆ. ಈ ನಿಟ್ಟಿನಲ್ಲಿ ತನಿಖೆ ನಡೆಯಬೇಕೆಂದು ಕಮಲೇಶ್ ತಾಯಿ ಆಗ್ರಹಿಸಿದರು.
ಶಿವಕುಮಾರ್ ಗುಪ್ತನೇ ತನ್ನ ಮಗನ ಸಾವಿಗೆ ಕಾರಣ ಎಂದು ಅವರು ಹೇಳಿದ್ದಾರೆ. ಈತನ ವಿಚಾರಣೆ ನಡೆಸಿದರೆ ಸತ್ಯ ಹೊರಗೆ ಬರಲಿದೆ. ತತ್ತೇರಿ ಏರಿಯದಲ್ಲಿ ಶಿವಕುಮಾರ್ ವಾಸವಿದ್ದಾನೆ. ಶಿವಕುಮಾರ್ ಮತ್ತು ಕಮಲೇಶ್ ನಡುವೆ ಜಾಗ ವಿವಾದವಿದೆ ಎಂದು ತಿವಾರಿಯ ತಾಯಿ ಹೇಳಿದರು.
ಇದೇ ವೇಳೆ ಪ್ರವಾದಿಯ ವಿರುದ್ಧ ಕಮಲೇಶ್ ನೀಡಿದ ಹೇಳಿಕೆ ಕೊಲೆಗೆ ಕಾರಣವೆಂದು ಪತ್ನಿ ಆರೋಪಿಸುತ್ತಿದ್ದಾರೆ. ಹಿಂದೂ ಸಮಾಜ್ ಪಾರ್ಟಿಯ ನಾಯಕ ಕಮಲೇಶ್ ಇತ್ತೀಚೆಗೆ ಕೊಲೆಯಾಗಿದ್ದರು.