ಉಡುಪಿ : ಇಂದು ‘ಅಶೀರನ ಕವನಗಳು’ ಪುಸ್ತಕ ಬಿಡುಗಡೆ ಕಾರ್ಯಕ್ರಮ

0
1273

ಸನ್ಮಾರ್ಗ ವಾರ್ತೆ

ಉಡುಪಿ: ಸಂವೇದನ ಫಾರಂ ಫಾರ್ ಆರ್ಟ್, ಕಲ್ಚರ್ ಆ್ಯಂಡ್ ಲಿಟ್ರೇಚರ್ ಬೆಂಗಳೂರು ಇದರ ವತಿಯಿಂದ ಉದಯೋನ್ಮುಖ ಕವಿ ಎಂ ಅಶೀರುದ್ದೀನ್ ಮಂಜನಾಡಿರವರ ಚೊಚ್ಚಲ ಕವನ ಸಂಕಲನ “ಅಶೀರನ ಕವನಗಳು” ಇಂದು ಶನಿವಾರ ಸಂಜೆ 5-30 ಕ್ಕೆ ಉಡುಪಿಯ ದುರ್ಗಾ ಇಂಟರ್ ನ್ಯಾಶನಲ್ ಹಾಲ್ ನಲ್ಲಿ ಬಿಡುಗಡೆಯಾಗಲಿದೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂವೇದನ ಫಾರಂ ಫಾರ್ ಆರ್ಟ್, ಕಲ್ಚರ್ ಆ್ಯಂಡ್ ಲಿಟ್ರೇಚರ್ ಇದರ ಅಧ್ಯಕ್ಷರಾದ ಕಿದಿಯೂರು ನಿಹಾಲ್ ಸಾಹೇಬ್ ವಹಿಸಲಿದ್ದಾರೆ. ಕವನ ಸಂಕಲನವನ್ನು ಮಂಗಳೂರಿನ ಖ್ಯಾತ ವೈದ್ಯರು ಮತ್ತು ಬರಹಗಾರರು ಆದ ಡಾ. ಸುರೇಶ್ ನೆಗಳಗುಳಿ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಸೌರಭ ಪ್ರಕಾಶನದ ನಿರ್ದೇಶಕರು ಕವಿಗಳು ಆದ ಜಿ ಎಂ ಶರೀಫ್ ಹೂಡೆ ಆಗಮಿಸಲಿದ್ದಾರೆ.

ಅಶೀರುದ್ದೀನ್‌ರವರು ಪ್ರಸ್ತುತ ಸ್ನೇಹ ಪಬ್ಲಿಕ್ ಸ್ಕೂಲ್ ನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಅವರು ಮುಸ್ಲೀಮ್ ಲೇಖಕರ ಸಂಘ, ಕೋಮು ಸೌಹಾರ್ದ ವೇದಿಕೆ, ಎಸ್ ಐ ಓ, ಮೇಲ್ತನೆ ಬ್ಯಾರಿ ಸಂಘ ಇನ್ನೀತರ ವಿವಿಧ ಸಂಘ ಸಂಸ್ಥೆಗಳಲ್ಲಿ ತನ್ನನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ಇಂಕ್ ಡಬ್ಬಿ,ಕಾಂ ಇದರ ಉಪ ಸಂಪಾದಕರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಯುವ ಕವಿ ಅಶೀರ್ ರವರ ಕವನ, ಲೇಖನಗಳು ಸನ್ಮಾರ್ಗ ಸೇರಿದಂತೆ ವಿವಿಧ ಪತ್ರಿಕೆಗಳಲ್ಲಿ ಪ್ರಕಟಿತಗೊಂಡಿದೆ.

ಎಂ.ಅಶೀರುದ್ದೀನ್ ಮಂಜನಾಡಿ