ಉತ್ತರ ಪ್ರದೇಶದಲ್ಲಿ ನಾವು 400 ಸೀಟುಗಳನ್ನು ಗೆಲ್ಲುತ್ತೇವೆ- ಅಖಿಲೇಶ್ ಯಾದವ್

0
506

ಸನ್ಮಾರ್ಗ ವಾರ್ತೆ

ಲಕ್ನೊ: ಯೋಗಿ ಆದಿತ್ಯನಾಥ್‌ರ ಸರಕಾರವನ್ನು ಕಟುವಾಗಿ ಟೀಕಿಸಿದ ಸಮಾಜವಾದಿ ಪಾರ್ಟಿ ನಾಯಕ ಉತ್ತರ ಪ್ರದೇಶವಿಡೀ ಸೈಕಲ್ ಯಾತ್ರೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ರಾಜ್ಯ, ಮತ್ತು ಕೇಂದ್ರ ಸರಕಾರದ ವಿರುದ್ಧ ಜನರಲ್ಲಿ ಕ್ರೋಧವಿದೆ ಎಂದಿರುವ ಅವರು ಮುಂಬರುವ ಚುನಾವಣೆಯಲ್ಲಿ 350 ಸೀಟು ಗೆಲ್ಲಬಹುದು ಎಂದು ಹೇಳಲಾಗುತ್ತಿದೆ. ಆದರೆ, ನಾವು 400 ಸೀಟುಗಳನ್ನು ಗೆಲ್ಲುತ್ತೇವೆ ಎಂದು ಅಖಿಲೇಶ್ ಹೇಳಿದ್ದಾರೆ.

ಕೊರೋನ ನಿರ್ವಹಣೆಯಲ್ಲಿ ಪ್ರಮಾದ, ಅಸಾಮರ್ಥ್ಯವನ್ನು ಎತ್ತಿ ಹೇಳಿದ ಅಖಿಲೇಶ್ ಯೋಗಿ ಸರಕಾರದ ವಿರುದ್ಧ ಕೊರೋನದಿಂದ ಮೃತರಾದ ಹಲವಾರು ಮನುಷ್ಯರನ್ನು ನಾವು ಇಂದು ಸ್ಮರಿಸುತ್ತೇವೆ ಎಂದು ಹೇಳಿದರು. ಸೈಕಲ್ ಮೂಲಕ ಎಲ್ಲ ಜಿಲ್ಲೆಯಲ್ಲಿ ಪ್ರವಾಸ ಮಾಡಲು ಅಖಿಲೇಶ್ ಯೋಜನೆ ಹಾಕಿಕೊಂಡಿದ್ದಾರೆ. ಬಿಜೆಪಿ ಸರಕಾರ ಯುಪಿಯ ಜನರನ್ನು ಕೋಪಗೊಳ್ಳುವಂತೆ ಮಾಡಿದೆ. ಇದು ನಮ್ಮ ವಿಜಯಕ್ಕೆ ದೊಡ್ಡ ಕಾರಣವಾಗಲಿದೆ ಎಂದು ಅವರು ಭರವಸೆ ವ್ಯಕ್ತಪಡಿಸಿದರು.