ಭಟ್ಕಳ: ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷ ಎಂ.ಆರ್.ಮಾನ್ವಿಯವರಿಗೆ ಸನ್ಮಾನ

0
339

ಸನ್ಮಾರ್ಗ ವಾರ್ತೆ

ಭಟ್ಕಳ: ಭಟ್ಕಳ ತಾಲೂಕ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಚರಾಗಿ ಆಯ್ಕೆಯಾದ ವಾರ್ತಾ ಭಾರತಿ ಭಟ್ಕಳ ತಾಲೂಕಾ ವರದಿಗಾರ ಎಂ.ಆರ್.ಮಾನ್ವಿಯವರನ್ನು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಉ.ಕ ಜಿಲ್ಲಾ ಸಮಿತಿ ಪರವಾಗಿ ರಾಜ್ಯಾಧ್ಯಕ್ಷ ತಾಹೀರ್ ಹುಸೇನ್‌ರವರು ಭಾನುವಾರದಂದು ವೆಲ್ಫೇರ್ ಪಾರ್ಟಿಯ ಕಾರ್ಯಾಲಯದಲ್ಲಿ ಸನ್ಮಾನಿಸಿ ಗೌರವಿಸಿದರು.

ಕಳೆದ 20 ವರ್ಷಗಳಿಂದ ಪತ್ರಿಕಾ ರಂಗದಲ್ಲಿ ತೊಡಗಿಸಿಕೊಂಡಿರುವ ಮಾನ್ವಿಯವರು ಎಲ್ಲ ಸಮುದಾಯಗಳೊಂದಿಗೆ ಉತ್ತಮ ಬಾಂಧವ್ಯ ಇರಿಸಿಕೊಂಡಿದ್ದಾರೆ. ಸಮಾಜದಲ್ಲಿ ಸೌಹಾರ್ದತೆಯನ್ನುಂಟು ಮಾಡುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದು, ತಮ್ಮ ಮಾನವೀಯ ವರದಿಗಳ ಮೂಲಕ ಸಮಾಜಕ್ಕೆ ಕೊಡುಗೆಯನ್ನು ನೀಡುತ್ತಾ ಬಂದಿದ್ದಾರೆ. ಭಟ್ಕಳ ತಾಲೂಕಾ ಕಾರ್ಯನಿತರ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಆಯ್ಕೆಗೊಂಡಿರುವ ಇವರು ಇನ್ನಷ್ಟು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕೆಂದು ಅವರು ಹಾರೈಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಮಾನ್ವಿಯವರು, ರಾಜಕೀಯ ಪಕ್ಷಗಳು ತಮ್ಮ ತಮ್ಮ ಸಿದ್ಧಾಂತಗಳ ಜೊತೆಗೆ ಸಾಮಾಜಿಕ ಕಳಕಳಿಯನ್ನು ಇಟ್ಟುಕೊಳ್ಳಬೇಕು, ರಾಜಕೀಯ ಪಕ್ಷಗಳ ತಮ್ಮ ಸಿದ್ದಾಂತಗಳನ್ನು ಬಲವಾಗಿ ಹೇರುವ ಪ್ರಯತ್ನ ಮಾಡದೆ ಸಮಾಜಕ್ಕೆ ಏನು ಬೇಕು ಅದನ್ನು ಕೊಡುವ ಪ್ರಯತ್ನ ಮಾಡಬೇಕು. ಒಂದು ವೇಳೆ ರಾಜಕಾರಣಿಗಳು ಎಡವಿದರೆ ಅವರನ್ನು ಟೀಕಿಸುವ ಮತ್ತು ಸರಿ ತಪ್ಪನ್ನು ತಿಳಿಸುವ ಪತ್ರಕರ್ತರ ಮೇಲಿದೆ ಎಂದರು. ಮೌಲ್ಯಾಧಾರಿತ ರಾಜಕಾರಣ ಎಂಬ ಘೋಷಣೆಯೊಂದಿಗೆ ರಂಗಕ್ಕಿಳಿದಿರುವ ವೆಲ್ಫೇರ್ ಪಾರ್ಟಿಯ ಭವಿಷ್ಯ ಉಜ್ವಲವಾಗಲಿ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆಸೀಫ್ ಶೇಖ್, ರಾಜ್ಯ ಮಾಧ್ಯಮ ಕಾರ್ಯದರ್ಶಿ ಅಝೀಝ್ ಜಾಗಿರ್ದಾರ್, ರಾಜ್ಯ ಸಮಿತಿ ಸದಸ್ಯ ಮುಹಮ್ಮದ್ ಯುನೂಸ್ ರುಕ್ನುದ್ದೀನ್, ಮುಖಂಡರಾದ ಅಬ್ದುಲ್ ಜಬ್ಬಾರ್ ಅಸದಿ, ಫಾರೂಖ್ ಮಾಸ್ಟರ್, ಶೌಕತ್ ಖತೀಬ್, ಖಮರುದ್ದೀನ್ ಮಷಾಯಿಖ್ ಮುಂತಾದವರು ಉಪಸ್ಥಿತರಿದ್ದರು.