ಹಿಂದೂ ಮಹಾಸಭಾದಿಂದ ನಾಥೂರಾಂ ಗೋಡ್ಸೆ ಜನ್ಮದಿನ ಆಚರಣೆ

0
476

ಭೋಪಾಲ,ಮೇ 20: ಗ್ವಾಲಿಯರ್ ದೌಲತ್ ಗಂಜ್ ಹಿಂದೂ ಮಹಾಸಭಾ ಕಾರ್ಯಾಲಯದಲ್ಲಿ ನಾಥೂರಾಮ ಗ್ರೊಡ್ಸೆ ಜನ್ಮದಿನಾಚರಣೆ ನಡೆಸಲಾಗಿದೆ ಎಂದು ವರದಿಯಾಗಿದೆ. ಒಂದೆಡೆ ನಟ ರಾಜಕಾರಣಿ ಕಮಲ್ ಹಾಸನ್ ಗೋಡ್ಸೆಯನ್ನು ಸ್ವತಂತ್ರ ಭಾರತದ ಪ್ರಥಮ ಹಿಂದೂ ತೀವ್ರವಾದಿ ಎಂದು ಹೇಳಿದ ವಿವಾದ ಚಾಲ್ತಿಯಲ್ಲಿರುವಂತೆ ಗೋಡ್ಸೆ ಜನ್ಮದಿನಾಚರಣೆ ನಡೆದಿದೆ. ಕಮಲ್ ಹಾಸನ್ ಹೇಳಿಕೆಯ ಬೆನ್ನಿಗೆ ಭೋಪಾಲದ ಬಿಜೆಪಿ ಲೋಕಸಭಾ ಕ್ಷೇತ್ರ ಅಭ್ಯರ್ಥಿ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ‘ನಾಥೂರಾಂ ಗೋಡ್ಸೆಯನ್ನು ರಾಷ್ಟ್ರ ಭಕ್ತ’ ಎಂದು ಹೇಳಿ ವಿವಾದ ಸೃಷ್ಟಿಸಿದ್ದರು.