‘ಕೊಡಗು ರಿಲೀಫ್ ಸೆಲ್’ ಉದ್ಘಾಟಿಸಿದ ಜಮಾಅತೆ ಇಸ್ಲಾಮೀ ಹಿಂದ್ ರಾಜ್ಯಾಧ್ಯಕ್ಷ  ಅತರುಲ್ಲಾ ಶರೀಫ್

0
709

ನೆರೆ ಪೀಡಿತ ಕೊಡಗಿನ  ವಿವಿಧ ಪ್ರದೇಶಗಳಿಗೆ ಹಾಗೂ  ನಿರಾಶ್ರಿತ ಶಿಬಿರಕ್ಕೆ ಜಮಾಅತೆ ಇಸ್ಲಾಮೀ ಹಿಂದ್
ಕರ್ನಾಟಕ ರಾಜ್ಯಾಧ್ಯಕ್ಷ  ಜ.ಅತರುಲ್ಲಾ ಶರೀಫ್ ಹಾಗೂ ಶಾಂತಿ ಪ್ರಕಾಶನದ ವ್ಯವಸ್ಥಾಪಕ  ಜ.ಮುಹಮ್ಮದ್ ಕುಂಞಿ ಭೇಟಿ ನೀಡಿದರು. ಈ ಸಂದರ್ಭದಲ್ಲಿ “ಕೊಡಗು ರಿಲೀಫ್ ಸೆಲ್” ಕಛೇರಿಯನ್ನು  ಅತರುಲ್ಲಾ ಶರೀಫ್  ಉದ್ಘಾಟನೆಗೊಳಿಸಿದರು.

ಸಂತ್ರಸ್ತರ ದಾಖಲೆಗಳನ್ನು ಸರಿಪಡಿಸಲು, ಕಾನೂನಾತ್ಮಕ  ಸಲಹೆ ನೀಡಲು, ಸರಕಾರದಿಂದ ಸೂಕ್ತ  ಪರಿಹಾರ ಸಿಗುವಂತೆ ಮಾಡಲು ಹಾಗೂ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಲು ಕೊಡಗು ರಿಲೀಫ್ ಸೆಲ್ ಕಾರ್ಯನಿರ್ವಹಿಸಲಿದೆ.

ಇದಲ್ಲದೇ ಸಂತ್ರಸ್ತರ ಹಾಗೂ ಬಾಧಿತ ಪ್ರದೇಶಗಳ ನಾಶ ನಷ್ಟ ಸರ್ವೇ ಕಾರ್ಯವನ್ನು  ಮುಂದುವರಿಸಲಾಗುವುದು. ಕಳೆದ ಹತ್ತು ದಿನಗಳಿಂದ ನೆರೆ ಪೀಡಿತ ಕೊಡಗು ಜಿಲ್ಲಾ ಪ್ರದೇಶಗಳಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ಕಾರ್ಯನಿರತವಾಗಿದ್ದು ವಿವಿಧ ಸೇವಾ ಕಾರ್ಯಗಳಲ್ಲಿ ಸ್ವಯಂಸೇವಕರನ್ನು ನಿಯೋಜಿಸಿದೆ.