ಹಿರಿಯ ವಿದ್ವಾಂಸ ಬಿ.ಕೆ ಮಹ್ಮೂದ್ ಮುಸ್ಲಿಯಾರ್ ತಲಂಗರೆ ನಿಧನ

0
743

ಸನ್ಮಾರ್ಗ ವಾರ್ತೆ

ಕಾಸರಗೋಡು: ಇಲ್ಲಿನ ತಲಂಗರೆ ಖಾಝಿ ಲೈನ್ ನಿವಾಸಿ ಹಿರಿಯ ವಿದ್ವಾಂಸ, ವಾಗ್ಮಿ ಹಾಗೂ ಕರ್ಮಶಾಸ್ತ್ರ ಪಂಡಿತರಾಗಿದ್ದ ಬಿ.ಕೆ.ಮಹ್ಮೂದ್ ಮುಸ್ಲಿಯಾರ್ (71)ಅಕ್ಟೋಬರ್ 3ರಂದು ಅಲ್ಪಕಾಲದ ಅಸ್ವಾಸ್ಥ್ಯದಿಂದ ನಿಧನರಾದರು. ಸನ್ಮಾರ್ಗ ಸಂಪಾದಕರಾಗಿದ್ದ ಮರ್ಹೂಮ್ ಇಬ್ರಾಹಿಮ್ ಸಈದ್ ಮತ್ತು ಹಮೀದುಲ್ಲಾರ ಜೊತೆ ನಿಕಟ ಸಂಪರ್ಕವಿಟ್ಟುಕೊಂಡಿದ್ದರು. ಸನ್ಮಾರ್ಗದ ಪ್ರಶ್ನೋತ್ತರ ವಿಭಾಗಕ್ಕೆ ಸನ್ಮಾರ್ಗ ಸಂಪಾದಕರಾಗಿದ್ದ ಇಬ್ರಾಹಿಮ್ ಸಈದ್‌ರವರು ಸಲಹೆಯನ್ನು ಪಡೆಯುತ್ತಿದ್ದರು. ಬೋಳಂಗಡಿ ಹವ್ವಾ ಮಸೀದಿಯ ಖತೀಬರಾದ ಮೌಲಾನಾ ಯಹ್ಯಾ ತಂಙಳ್ ಜೊತೆಯೂ ನಿಕಟ ಸಂಪರ್ಕ ಹೊಂದಿದ್ದರು. ಮಂಗಳೂರು ಖಾಝಿ ತ್ವಾಕಾ ಅಹ್ಮದ್ ಮುಸ್ಲಿಯಾರ್‌ರವರ ಸೋದರಿಯನ್ನು ವಿವಾಹವಾಗಿರುವ ಮೃತರು ನಾಲ್ವರು ಪುತ್ರರು ಮತ್ತು ಮೂವರು ಪುತ್ರಿಯರ ಸಹಿತ ಅಪಾರ ಬಂಧುಬಳಗವನ್ನು, ಶಿಷ್ಯವೃಂದವನ್ನು ಅಗಲಿದ್ದಾರೆ.