ಹೊಸದಿಲ್ಲ,ಮಾ.30: ಹರಿಯಾಣದಲ್ಲಿ ಗುಂಪಿನಿಂದ ಥಳಿತಕ್ಕೊಳಗಾದ ಮುಸ್ಲಿಂ ಕುಟುಂಬದ ವಿರುದ್ಧ ಪ್ರಕರಣ ದಾಖಲಾಗಿದೆ. ರಾಜ್ ಕುಮಾರ್ ಎಂಬಾತನ ನೇತೃತ್ವದಲ್ಲಿ ತಂಡವೊಂದು ಮನೆಗೆ ನುಗ್ಗಿ ಮುಸ್ಲಿಂ ಕುಟುಂಬಕ್ಕೆ ಮಾರಣಾಂತಿಕವಾಗಿ ಹೊಡೆದಿತ್ತು. ಇದೇ ರಾಜ್ಕುಮಾರ್ ನೀಡಿದ ದೂರಿನಲ್ಲಿ ಪೊಲೀಸರು ಮುಸ್ಲಿಂ ಕುಟುಂಬದ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ.
ಶುಕ್ರವಾರ ರಾಜ್ಕುಮಾರ್ ದೂರು ನಿಡಿದ್ದಾನೆ ಎಂದು ಪೊಲೀಸರು ಹೇಳಿದರು. ಘಟನೆ ನಡೆಯುವಾಗ ರಾಜ್ಕುಮಾರ ತಲೆಗೆ ಪೆಟ್ಟಾಗಿತ್ತು ಎಂದು ಡೆಪ್ಯುಟಿ ಪೊಲೀಸ್ ಕಮಿಶನರ್ ಹಿಮಾಂಶು ಗಾರ್ಗ್ ಹೇಳಿದರು. ಈಗ ಮುಸ್ಲಿಂ ಕುಟುಂಬ ಮಾರಕಾಯುಧಗಳಿಂದ ಹಲ್ಲೆ ನಡೆಸಿದೆ ಎಂದು ಕೇಸು ದಾಖಲಿಸಿಕೊಳ್ಳಲಾಗಿದೆ.
ಕಳೆದ ಹೋಳಿ ಸಂದರ್ಭದಲ್ಲಿ ತಂಡವೊಂದು ಮುಸ್ಲಿಂ ಕುಟುಂಬದ ಮನೆಗೆ ನುಗ್ಗಿ ಹಲ್ಲೆ ನಡೆಸಿತ್ತು. ಹಲ್ಲೆ ನಡೆಸುವ ದೃಶ್ಯವನ್ನು ಚಿತ್ರೀಕರಿಸಿ ದುಷ್ಕರ್ಮಿಗಳು ವ್ಯಾಪಕ ಪ್ರಚಾರ ಮಾಡಿದ್ದರು. ನಂತರ ಪೊಲೀಸರು ದುಷ್ಕರ್ಮಿಗಳ ವಿರುದ್ಧ ಕೇಸು ದಾಖಲಿಸಿಕೊಂಡಿದ್ದರು.