ಭಾರತದ ಮಾರ್ಗಸೂಚಿ ಧರ್ಮವಲ್ಲ- ಕೇರಳ ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್

0
428

ಸನ್ಮಾರ್ಗ ವಾರ್ತೆ

ಕಾಸರಗೋಡು: ಭಾರತ ಮಾರ್ಗಸೂಚಿ ಧರ್ಮ ಅಲ್ಲ ಎಂದು ಕೇರಳದ ರಾಜ್ಯಪಾಲರಾದ ಆರಿಫ್ ಮುಹಮ್ಮದ್ ಖಾನ್ ಹೇಳಿದ್ದಾರೆ. ಕೇಂದ್ರ ವಿಶ್ವವಿದ್ಯಾನಿಲಯದ ಹನ್ನೆರಡನೆ ಸ್ಥಾಪಕ ವರ್ಷಾಚರಣೆಯನ್ನು ಉದ್ಘಾಟಿಸಿ ಅವರು ಮಾತಾಡುತ್ತಿದ್ದರು. ಕೇಂದ್ರ ಸಚಿವ ವಿ. ಮುರಳೀಧರನ್ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಒಂದು ಧರ್ಮವನ್ನು ಮಾತ್ರ ಒಪ್ಪಿಕೊಂಡರೆ ಇತರ ಧರ್ಮಗಳು ಇಲ್ಲದಂತಾಗುವುದು. ಒಂದು ವಂಶವನ್ನು, ಒಂದು ಭಾಷೆಯನ್ನು ಮಾತ್ರ ಆಧಾರವಾಗಿಟ್ಟರೆ ಇತರರು ಹೊರತಳ್ಳಲ್ಪಡುವರೆ ಎಂದು ರಾಜ್ಯಪಾಲರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲ ಇದು ಭಾರತದ ಪರಂಪರೆಯೂ ಅಲ್ಲ. ವಿಶ್ವಕ್ಕೆ ಭಾರತ ಕೊಟ್ಟಿರುವ ಕೊಡುಗೆ ಬಹುತ್ವವಾಗಿದೆ. ಬಹುತ್ವದಿಂದ ಏಕತೆ ಕಂಡು ಕೊಳ್ಳಬೇಕೆಂಬ ಸಂದೇಶವಾಗಿದೆ ಎಂದು ರಾಜ್ಯಪಾಲರು ಈ ಸಂದರ್ಭದಲ್ಲಿ ಹೇಳಿದರು.