ಸನ್ಮಾರ್ಗ ವಾರ್ತೆ
ಸೀರತ್ ಪ್ರಯುಕ್ತ ಸೆಪ್ಟೆಂಬರ್ 16 ರಂದು ಸೋಮವಾರ ಚಾಮರಾಜನಗರದ ಮದೀನ ಮಸೀದಿಯಲ್ಲಿ ಆಯೋಜಿಸಲಾಗಿರುವ “ಸಾರ್ವಜನಿಕ ಮಸ್ಜಿದ್ ದರ್ಶನ” ಕಾರ್ಯಕ್ರಮದ ಪ್ರಚಾರಾರ್ಥ ಆಟೋ ಪ್ರಚಾರ ಜಾಥಾವನ್ನು ಮದೀನಾ ಮಸೀದಿ ಆಡಳಿತ ಮಂಡಳಿ ಅಧ್ಯಕ್ಷರಾದ ಜನಾಬ್ ನಯೀಮ್ ಉಲ್ ಹಕ್ ಉದ್ಘಾಟಿಸಿದರು.
ಜಮಾಅತೆ ಇಸ್ಲಾಮೀ ಹಿಂದ್ ಚಾಮರಾಜನಗರ ಜಿಲ್ಲಾಧ್ಯಕ್ಷರಾದ ಜನಾಬ್ ಝೈನುಲ್ ಆಬಿದೀನ್, ಮದೀನಾ ಮಸೀದಿ ಉಪಾಧ್ಯಕ್ಷರಾದ ಸೈಯ್ಯದ್ ರಈಸ್ ಅಹ್ಮದ್, ಮಸ್ಜಿದ್ ದರ್ಶನ್ ಕಾರ್ಯಕ್ರಮದ ಉಪ ಸಂಚಾಲಕರಾದ ವಾಹಿದ್ ಅಲಿ ಮೈಸೂರು, ಮೈಸೂರಿನ ಜಮಾಅತ್ ಕಾರ್ಯಕರ್ತರಾದ ವಿ.ಪಿ.ಇಸ್ಮಾಯಿಲ್, ಮುದಸ್ಸಿರ್ ಅಹ್ಮದ್ ಹಾಗೂ ಆಟೋ ಚಾಲಕರ ಸಹಿತ ಇನ್ನಿತರರು ಉಪಸ್ಥಿತರಿದ್ದರು.
ಇಂದು ಮತ್ತು ನಾಳೆ ಆಟೋ ಪ್ರಚಾರ ಜಾಥಾ ನಗರ ಹಾಗೂ ಸುತ್ತುಮುತ್ತಲಿನ ಪ್ರದೇಶಗಳಲ್ಲಿ ಪ್ರಚಾರವನ್ನು ಕೈಗೊಳ್ಳಲಿರುವುದೆಂದು ಅಧ್ಯಕ್ಷರು ತಿಳಿಸಿದರು.