ಮಗಳಿಗೆ ರಾಖಿ ಕಟ್ಟಲು ಮಗುವನ್ನು ಅಪಹರಿಸಿದ ದಂಪತಿ

0
185

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಆ. 26: ರಕ್ಷ ಬಂಧನ ಉತ್ಸವದಲ್ಲಿ ರಾಖಿ ಕಟ್ಟಲು ಸಹೋದರ ಬೇಕೆಂದು ಮಗಳು ಹೇಳಿದ್ದರಿಂದ ಒಂದು ತಿಂಗಳ ವಯಸ್ಸಿನ ಗಂಟು ಮಗುವನ್ನು ಅಪರಿಸಿದ್ದ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ.

ರಘಬೀರ್ ನಗರದ ಠಾಗೊರ್ ಗಾರ್ಡನ್‍ನ ನಿವಾಸಿ ಸಂಜಯ್ ಗುಪ್ತ(41) ಅನಿತಾ ಗುಪ್ತ(36)  ಚತ್ತಾ ರೈಲು ಚೌಕ್‍ನಿಂದ ದಾರಿ ಬದಿ ನಿದ್ರಿಸುತ್ತಿದ್ದ ಅಂಗವಿಕಲ ಮಹಿಳೆಯ ಮಗುವನ್ನು ಮಧ್ಯ ರಾತ್ರೆ ಕಿತ್ತುಕೊಂಡು ತಂದಿದ್ದರು.

ಗುರುವಾರ ಈ ಮಹಿಳೆ ಮಗು ಕಳೆದು ಕೊಂಡಿರುವುದು ಗೊತ್ತಾಗಿದೆ. ನಂತರ ಪೊಲೀಸರಿಗೆ ದೂರು ನೀಡಿದ್ದರು. ಪರಿಸರದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ ಶಂಕಾಸ್ಪದವಾಗಿ ಇಬ್ಬರು ಬೈಕಿನಲ್ಲಿ ಸುತ್ತುತ್ತಿರುವುದು ಕಂಡು ಬಂತು. ಈ ಬೈಕ್ ಆಧಾರದಲ್ಲಿ ನಡೆದ ತನಿಖೆಯಲ್ಲಿ ಅಪಹರಣಕಾರ ದಂಪತಿಗಳು ಪತ್ತೆಯಾದರು.

ಸಂಜಯ್, ಅನಿತಾ ದಂಪತಿಯ 17 ವರ್ಷದ ಮಗ ಕಳೆದ ವರ್ಷ ಆಗಸ್ಟ್ ನಲ್ಲಿ ಟೆರೆಸ್ಸಿನಿಂದ ಬಿಂದು ಮೃತಪಟ್ಟಿದ್ದ. ಮುಂದಿನ ರಕ್ಷ ಬಂಧಾನಕ್ಕೆ ರಾಖಿ ಕಟ್ಟಲು ಸಹೋದರ ಬೇಕೆಂದು 15 ವರ್ಷದ ಮಗಳು ಹೇಳಿದ್ದಾಳೆ. ನಂತರ ಗಂಡು ಮಗುವನ್ನು ಅಪರಹರಿಸಲು ಯೋಜನೆ ರೂಪಿಸಿದೆವು ಎಂದು ದಂಪತಿಗಳು ಪೊಲೀಸರಿಗೆ ತಿಳಿಸಿದ್ದಾರೆ.