ಹತ್ರಸ್ ಅತ್ಯಾಚಾರ, ಕೊಲೆ ಪ್ರಕರಣ: ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರಾಜೀನಾಮೆ ನೀಡಲಿ- ನಟಿ ಸ್ವರಾ ಭಾಸ್ಕರ್

0
1110

ಸನ್ಮಾರ್ಗ ವಾರ್ತೆ

ಮುಂಬೈ: ಉತ್ತರ ಪ್ರದೇಶದ ಹತ್ರಸ್ ಸಾಮೂಹಿಕ ಅತ್ಯಾಚಾರಕ್ಕೆ ತುತ್ತಾದ ದಲಿತ ಯುವತಿ ದಿಲ್ಲಿಯ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು ಈ ಘಟನೆಯ ವಿರುದ್ಧ ಇಡೀ ದೇಶದಲ್ಲಿಯೇ ಆಕ್ರೋಶ ಭುಗಿಲೆದ್ದಿದೆ. ಘಟನೆಯ ಕುರಿತು ನಟಿ ಸ್ವರಾ ಭಾಸ್ಕರ್ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರಾಜೀನಾಮೆಗೆ ಆಗ್ರಹಿಸಿದ್ದಾರೆ. ಆದಿತ್ಯನಾಥ್ ರಾಜೀನಾಮೆ ನೀಡಲು ಈಗ ಸಮಯ ಆಗಿದೆ. ಅವರು ರಾಜೀನಾಮೆ ನೀಡಬೇಕು. ಅವರ ಆಡಳಿತದಲ್ಲಿ ಕಾನೂನು ವ್ಯವಸ್ಥೆ ಚಿಂದಿಯಾಗಿದ್ದು ಅವರ ನೀತಿ ಕೋಮು ಗಲಭೆ ಮಾಡಿಸಿತು. ನಕಲಿ ಎನ್‍ಕೌಂಟರ್, ಗ್ಯಾಂಗ್ ರೇಪ್ ಮತ್ತು ಉತ್ತರ ಪ್ರದೇಶದಲ್ಲಿ ಅತ್ಯಾಚಾರದ ಮಹಾಮಾರಿಯೇ ಅವರ ನೀತಿಯಿಂದಾಗಿ ಹರಡಿಕೊಂಡಿದೆ. ಇದಕ್ಕೆ ಹತ್ರಸ್ ಪ್ರಕರಣ ಕೇವಲ ಒಂದು ಉದಾಹರಣೆ ಮಾತ್ರ ಆಗಿದೆ ಎಂದು ಸ್ವರಾ ಭಾಸ್ಕರ್ ಟ್ವೀಟ್ ಮಾಡಿದ್ದಾರೆ.

ಈ ಹಿಂದೆ ಸ್ವರಾ ಭಾಸ್ಕರ್ ಕೇಂದ್ರ ಸಚಿವ ರಾಮ್‍ದಾಸ್ ಅಠಾವಳೆಯವರನ್ನೂ ಟೀಕಿಸಿದ್ದರು. ಪಾಯಲ್ ಘೋಷ್ ಜೊತೆ ಅಠಾವಳೆ ಮಹಾರಾಷ್ಟ್ರ ರಾಜ್ಯಪಾಲರನ್ನು ಭೇಟಿಯಾದ ಫೋಟೋವನ್ನು ರೀಟ್ವೀಟ್ ಮಾಡಿ ಒಳ್ಳೆಯ ರಾಜಕಾರಣಿ ಅಠಾವಳೆ ಈ ಬೆಂಬಲವನ್ನು ಹತ್ರಸ್ ಸಾಮೂಹಿಕ ಅತ್ಯಾಚಾರಕ್ಕೊಳಗಾದ ಸಂತ್ರೆಸ್ತೆಯ ಕುಟುಂಬಕ್ಕೆ ಕೊಟ್ಟಿರುತ್ತಿದ್ದರೆ ಎಂದು ಸ್ವರಾ ಭಾಸ್ಕರ್ ಬರೆದಿದ್ದರು.