‘ನರೇಂದ್ರ ಮೋದಿ ಸರಕಾರ ಹಿಂದೂ-ಮುಸ್ಲಿಮರನ್ನು ಪರಸ್ಪರ ಬಡಿದಾಡಿಸುತ್ತಿದೆ’- ಅರ್ಥಶಾಸ್ತ್ರಜ್ಞ ಜೋಸೆಫ್ ಸ್ಟಿಗ್‍ಲಿಸ್ಟ್

0
1345

ಸನ್ಮಾರ್ಗ ವಾರ್ತೆ

ವಾಷಿಂಗ್ಟನ್,ಅ.8: ನರೇಂದ್ರ ಮೋದಿ ಸರಕಾರ ಹಿಂದೂ-ಮುಸ್ಲಿಮರನ್ನು ಪರಸ್ಪರ ಬಡಿದಾಡಿಸುತ್ತಿದೆ. ಇದು ಭಾರತವನ್ನು ಶಾಶ್ವತವಾಗಿ ನಾಶಕ್ಕೊಯ್ಯಲಿದೆ ಎಂದು ಅಮೆರಿಕದ ಅರ್ಥ ಶಾಸ್ತ್ರಜ್ಞ, ಗ್ರಂಥಕರ್ತ ಜೋಸೆಫ್ ಸ್ಟಿಗ್‍ಲಿಸ್ಟ್ ಹೇಳಿದ್ದಾರೆ.

ಫೆಡರೇಶನ್ ಆಫ್ ಇಂಡಿಯ ಚೇಂಬರ್ಸ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರೀಯ ವೆಬ್ ಕಾನ್ಫರೆನ್ಸ್‌ನಲ್ಲಿ ನೋಬೆಲ್ ವಿಜೇತ ಕೂಡ ಆಗಿರುವ ಅವರು ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ನಿಮ್ಮ ಕಳೆದ 250 ವರ್ಷದ ಆರ್ಥಿಕ ಪ್ರಗತಿಗೆ ಕಾರಣ ಸಹಿಷ್ಣುತೆ, ಬಹುತ್ವ. ನೀವು ಮಾಡಬೇಕಾಗಿರುವುದಕ್ಕಿಂತ ತದ್ವಿರುದ್ಧವಾಗಿ ವಿಭಾಜಕ ರಾಜಕೀಯ ನಡೆಯುತ್ತಿದೆ. ಮೋದಿ ನಿಮ್ಮ ದೇಶವನ್ನು ವಿಭಜಿಸಲು ಶ್ರಮಿಸುತ್ತಿದ್ದಾರೆ. ಮುಸ್ಲಿಮರನ್ನು ಮತ್ತು ಹಿಂದೂಗಳನ್ನು ಪರಸ್ಪರ ಹೊಡೆದಾಡಿಕೊಳ್ಳುವಂತೆಯೂ, ಇದು ನಿಮ್ಮ ಸಾಮಾಜಿಕ-ಆರ್ಥಿಕ ವ್ಯವಸ್ಥೆಯನ್ನು ನಾಶಪಡಿಸಲಿದೆ. ತಳಮಟ್ಟದ ಸ್ವಭಾವದಲ್ಲಿ ಆಗುತ್ತಿರುವ ಈ ವಿಭಜನೆ ಭಾರತವನ್ನು ಶಾಶ್ವತವಾಗಿ ನಾಶಮಾಡಲಿದೆ”.

“ಭಾರತ, ಅಮೆರಿಕ, ಬ್ರೆಝಿಲ್ ಮುಂತಾದ ದೇಶಗಳು ಕೊರೋನವನ್ನು ಪ್ರತಿರೋಧಿಸುವಲ್ಲಿ ಸಂಪೂರ್ಣ ವಿಫಲಗೊಂಡಿವೆ. ಏನು ಮಾಡಬಾರದೆಂಬುದಕ್ಕೆ ಉತ್ತಮ ಉದಾಹರಣೆ ಭಾರತ ಆಗಿದೆ. ಭಾರತದಂತಹ ಒಂದು ಬಡ ದೇಶದಲ್ಲಿ ಲಾಕ್‍ಡೌನ್ ಘೋಷಿಸುವಾಗ ಹೆಚ್ಚು ಯೋಚಿಸಬೇಕಾಗಿತ್ತು. ಜನರು ಹೇಗೆ ಬದುಕಿಯಾರು ಎಂದು ಮನವರಿಕೆ ಮಾಡಿಕೊಳ್ಳಬೇಕಾಗಿತ್ತು. ಬಹಳಷ್ಟು ಜನರು ದೇಶವಿಡೀ ಸಂಚರಿಸುತ್ತಲೇ ಇದ್ದರು. ಅಂಟು ರೋಗವನ್ನು ನಿರ್ಮೂಲಿಸಲಾಗದ್ದರಿಂದ ಆರ್ಥಿಕ ಶಕ್ತಿ ಪುನಶ್ಚೇತನಗೊಳಿಸಲು ಸಾಧ್ಯವಾಗದ್ದರಿಂದ ಭಾರತ ಪ್ರತಿರೋಧ ಕಾರ್ಯಗಳತ್ತ ಗಮನ ಕೇಂದ್ರೀಕರಿಸಬೇಕೆಂದು ಸ್ಟಿಗ್‍ಲಿಟ್ಸ್ ಹೇಳಿದರು.

ಸಾರ್ವಜನಿಕ ನೀತಿ ತಜ್ಞರು ಕೂಡ ಆಗಿರುಚವ ಸ್ಟಿಗ್‍ಲಿಟ್ಸ್ ಅಮೆರಿಕದ ಕೊಲಂಬಿಯ ಯುನಿವರ್ಸಿಟಿಯ ಪ್ರೊಫೆಸರ್ ಆಗಿದ್ದಾರೆ. ವಿಶ್ವಬ್ಯಾಂಕಿನ ಹಿರಿಯ ಉಪಾಧ್ಯಕ್ಷರು, ಚೀಫ್ ಇಕಾನಮಿಸ್ಟ್‌ ಆಗಿ ಕೆಲಸ ಮಾಡಿದ ಅವರಿಗೆ 2001ರಲ್ಲಿ ನೋಬೆಲ್ ಪಾರಿತೋಷಕ ಲಭಿಸಿದೆ.