ಬಿ.ಸಿ ರೋಡ್‍: ಜಮಾಅತೆ ಇಸ್ಲಾಮಿಯಿಂದ ಸೀರತ್ ಸ್ವಚ್ಛತಾ ಅಭಿಯಾನ

0
403

ಸನ್ಮಾರ್ಗ ವಾರ್ತೆ

ಬಿ.ಸಿ ರೋಡು: ಇಲ್ಲಿನ ಪರ್ಲಿಯಾದ ರುಖಿಯಾ ಜುಮ್ಮಾ ಮಸೀದಿಯಿಂದ ಕೈಕಂಬದ ನರ್ಸಿಂಗ್ ಹೋಮ್ ತನಕದ ರಸ್ತೆಯ ಸ್ವಚ್ಛತಾ ಕಾರ್ಯಕ್ರಮವು ನವೆಂಬರ್ 15ರ ಭಾನುವಾರದಂದು ಜರಗಿತು. ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ರಾಜ್ಯವು ಸಂಘಟಿಸಿದ ‘ಪ್ರವಾದಿ ಮುಹಮ್ಮದ್(ಸ) ಮಾನವತೆಯ ಮಾರ್ಗದರ್ಶಕ’ ಸೀರತ್ ಅಭಿಯಾನ ಪ್ರಯುಕ್ತ ನಡೆದ ಈ ಸ್ವಚ್ಛತಾ ಕಾರ್ಯಕ್ರಮವನ್ನು ಬಂಟ್ವಾಳ ಪುರ ಸಭೆಯ ನೂತನ ಅಧ್ಯಕ್ಷರಾದ ಶರೀಫ್‍ ಶಾಂತಿ ಅಂಗಡಿ ಉದ್ಘಾಟಿಸಿದರು.

ಈ ಕಾರ್ಯಕ್ರಮದಲ್ಲಿ ಜ.ಇ ಬಂಟ್ವಾಳ ತಾಲೂಕು ಅಧ್ಯಕ್ಷರಾದ ಶಾಹುಲ್ ಹಮೀದ್ ಪರ್ಲಿಯಾ, ಹೆಚ್.ಆರ್. ಎಸ್. ಬಂಟ್ವಾಳ ತಾಲೂಕು ಅಧ್ಯಕ್ಷರಾದ ಸತ್ತಾರ್ ಗೂಡಿನ ಬಳಿ ಜ.ಇ ಬಂಟ್ವಾಳ ಶಾಖೆಯ ಇಲ್ಯಾಸ್ ಬಂಟ್ವಾಳ ಉಪಸ್ಥಿತರಿದ್ದರು.

ಹೆಚ್.ಆರ್.ಎಸ್, ಬಂಟ್ವಾಳ ತಾಲೂಕು ಘಟಕ, ಜಮಾಅತೆ ಇಸ್ಲಾಮೀ ಬಂಟ್ವಾಳ ಮತ್ತು ಬಿ.ಸಿ ರೋಡು ವರ್ತುಲ ಹಾಗೂ ಝಿಯಾವುಲ್ ಇಸ್ಲಾಮ್ ಮದ್ರಸದ ವತಿಯಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಜ.ಇ.ಪರ್ಲಿಯಾ ಬಿ.ಸಿ.ರೋಡು ವರ್ತುಲದ ಅಧ್ಯಕ್ಷರಾದ ಅಮಾನುಲ್ಲಾ ಖಾನ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.