ದೀಪಾವಳಿಗೆ ಪಟಾಕಿ ಖರೀದಿಸಲು ಹೋದ ಬಾಲಕಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

0
364

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ದೀಪಾವಳಿಗೆ ಪಟಾಕಿ ಖರೀದಿಸಲು ಹೋದ ಬಾಲಕಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ವಿಕೃತ ಸ್ಥಿತಿಯಲ್ಲಿ ಕಂಡು ಬಂದ ಬಾಲಕಿಯ ಮೃತದೇಹದ ಆಂತರಿಕ ಅವಯವಗಳು ನಷ್ಟವಾಗಿದೆ. ಉತ್ತರ ಪ್ರದೇಶದ ಕಾನ್ಪುರದಲ್ಲಿ ಗೌತಂ ಪುರದ ಠಾಣಾ ವ್ಯಾಪ್ತಿಯಲ್ಲಿ ಆರು ವರ್ಷದ ಬಾಲಕಿಯ ಮೃತ್ಯು ಸಂಭವಿಸಿದೆ.

ಮಗಳು ದುಷ್ಟ ಮಂತ್ರವಾದಕ್ಕೆ ಬಲಿಯಾಗಿದ್ದಾಳೆ ಎಂದು ಕುಟುಂಬದವರು ಹೇಳಿದ್ದಾರೆ. ಆದರೆ, ಕಾಡುಮೃಗಗಳು ದಾಳಿ ಮಾಡಿ ಕೊಂದಿರಬಹುದು ಎಂಬ ಶಂಕೆಯಿದೆ. ಎಲ್ಲ ರೀತಿಯಲ್ಲಿ ತನಿಖೆ ಮಾಡಿ ಕೆಲವರನ್ನು ಮಾತ್ರ ಕಸ್ಟಡಿಗೆ ತೆಗೆದುಕೊಂಡಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

ಶನಿವಾರ ಸಂಜೆ ಅಂಗಳದಲ್ಲಿ ಕಲಿಯುತ್ತಿದ್ದ ಮಗಳು ನಂತರ ನೆರೆಮೆನೆಯ ಇನ್ನೊಂದು ಬಾಲಕಿಯೊಂದಿಗೆ ದೀಪಾವಳಿಗೆ ಪಟಾಕಿ ಖರೀದಿಸಲು ಅಂಗಡಿಗೆ ಹೋಗುವುದನ್ನು ನೋಡಿದ್ದೆ ಎಂದು ತಂದೆ ಹೇಳಿದರು. ರವಿವಾರ ಬೆಳಗ್ಗೆ ಭದ್ರಾಸ್ ಗ್ರಾಮದಲ್ಲಿ ಬಾಲಕಿಯ ಮೃತದೇಹ ಕಂಡು ಬಂದಿತ್ತು.