ಸನ್ಮಾರ್ಗ ವಾರ್ತೆ
ತಿರುವನಂತಪುರಂ,ಅ.30: ಅಟ್ಟಪ್ಪಾಡಿಯ ಕಾಡಿನಲ್ಲಿ ಮಾವೊವಾದಿಗಳ ಎನ್ಕೌಂಟರ್ ನಡೆದಿದ್ದು ಇದಕ್ಕೆ ಸಿಪಿಎಂ ಕೇರಳ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್ರ ಪುತ್ರ ಬಿನೇಷ್ ಕೊಡಿಯೇರಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.
ಮಾವೋವಾದಿ ಆಶಯಗಳು ವ್ಯಕ್ತಿಯನ್ನು ಇಲ್ಲದಾಗಿಸಿ ನಿರ್ಮೂಲಿಸಲು ಸಾಧ್ಯವಿಲ್ಲ. ಅದು ಒಂದು ದಿವಸ ಹಠಾತ್ತಾಗಿ ಹುಟ್ಟಿ ಮೇಲೆ ಬಂದದ್ದಲ್ಲ. ಅದಕ್ಕೆ ಸುದೀರ್ಘ ಕಾಲ ಕಮ್ಯೂನಿಸ್ಟ್ ಇತಿಹಾಸದ ಹಿಂಬಲವಿದೆ. ಅವರನ್ನು ಗುಂಡಿಟ್ಟು ಕೊಲ್ಲುವುದರಿಂದ ಮಾವೋವಾದವನ್ನು ಇಲ್ಲದಾಗಿಸಲು ಸಾದ್ಯವಿಲ್ಲ ಎಂದು ಫೇಸ್ಬುಕ್ನಲ್ಲಿ ಬಿನೀಷ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪ್ರಜಾಪ್ರಭುತ್ವದಲ್ಲಿ ವಿಶ್ವಾಸ ಇಲ್ಲದವರಿಗೂ ಪ್ರಜಾಪ್ರಭುತ್ವ ಪರವಾದ, ಮಾನವಹಕ್ಕು ಪರವಾದ ಹಕ್ಕುಗಳನ್ನು ಭರವಸೆ ನೀಡುವ ವ್ಯವಸ್ಥೆ ಪ್ರಜಾಪ್ರಭುತ್ವವಾಗಿದೆ ಎಂದು ಅವರು ಹೇಳಿದರು. ಅವರ ಕಾನೂನು ವಿರೋಧಿ, ದೇಶದ್ರೋಹಿ ಪ್ರವೃತ್ತಿಗಳನ್ನು ಕಾನೂನಿನ ಕೈಗೊಪ್ಪಿಸುವ ಜವಾಬ್ದಾರಿ ಸರಕಾರದ್ದಾಗಿದೆ. ಕೊಲ್ಲಲ್ಪಟ್ಟವರಿಗೆ ಒಂದು ಹಿಡಿ ರಕ್ತಪುಷ್ಪಗಳು ಎಂದು ಫೇಸ್ಬುಕ್ ಪೋಸ್ಟನ್ನು ಬಿನೀಷ್ ಕೊನೆಗೊಳಿಸಿದ್ದಾರೆ.